ಕಾಸರಗೋಡು : ನಗರದ ಜುವಲ್ಲರಿಯಿಂದ ಒಂದೂವರೆ ಪವನ್ ಚಿನ್ನಾಭರಣ ಸಹಿತ ಪರಾರಿಯಾಗಿದ್ದ ಆರೋಪಿಯನ್ನು ಗಂಟೆಗಳೊಳಗೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಇಡುಕ್ಕಿ ತೊಡುಪುಯದ ಜೋಬಿ ಜೋರ್ಜ್ ( 40) ಬಂಧಿತ ಆರೋಪಿ.
ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದೆ. ನಗರದ ತಾಲೂಕು ಕಚೇರಿಯ ಮುಂಭಾಗದ ಟಿ. ಎಚ್ ದಿನೇಶ್ ರವರ ಮಾಲಕತ್ವದ ಚಂದ್ರಗಿರಿ ಜುವೆಲ್ಲರಿಯಲ್ಲಿ ಘಟನೆ ನಡೆದಿದೆ.
ಚಿನ್ನಾಭರಣ ಖರೀದಿ ಸೋಗಿನಲ್ಲಿ ಬಂದ ಜೋಬಿ ಚಿನ್ನದ ಸರ ಸಹಿತ ಸ್ಥಳ ಖಾಲಿ ಮಾಡಿದ್ದನು. ಮಾಲಕ ಪರಿಶೀಲಿಸಿದಾಗ ಒಂದೂವರೆ ಪವನ್ ಚಿನ್ನಾಭರಣ ನಾಪತ್ತೆಯಾಗಿರುವುದು ಕಂಡುಬಂದಿತ್ತು .
ಸಿಸಿ ಟಿ ವಿ ಗಮನಿಸಿದಾಗ ಚಿನ್ನದ ಸರ ತಪ್ಪಿಸುತ್ತಿರುವುದು ಪತ್ತೆಯಾಗಿದೆ . ಕೂಡಲೇ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದರು . ಜುವೆಲ್ಲರಿಗೆ ಆಗಮಿಸಿದ ಪೊಲೀಸರು ದ್ರಶ್ಯ ಪರಿಶೀಲಿಸಿ ತನಿಖೆ ಆರಂಭಿಸಿದ್ದರು . ಇತರ ಚಿನ್ನಾಭರಣ ಮಳಿಗೆಗೂ ಮಾಹಿತಿ ನೀಡಲಾಯಿತು .
ಈ ನಡುವೆ ಈತ ಚಿನ್ನದ ಸರವನ್ನು ಕಾ ಞ0ಗಾಡ್ ನ ಜುವೆಲ್ಲರಿ ಯೊಂದರಲ್ಲಿ 54,500 ರೂ . ಗೆ ಮಾರಾಟ ಮಾಡಿರುವುದು ಕಂಡು ಬಂದಿದ್ದು , ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.