ಕಾಸರಗೋಡು: ಹೊಳೆಗೆ ಸ್ನಾನಕ್ಕಿಳಿದ ವಿದ್ಯಾರ್ಥಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಚಿಮೇನಿಯಲ್ಲಿ ನಡೆದಿದೆ.
ವಳಿಯಪರಂಬದ ಕೆ.ಸಿ ಶುಕೂರ್ ರವರ ಪುತ್ರ ಬಿಲಾಲ್ (17) ಮೃತ ಪಟ್ಟವನು. ಸಹೋದರ ಹಾಗೂ ಸಹಪಾಠಿಗಳ ಜೊತೆ ಹೊಳೆಗಿಳಿದ ಸಂದರ್ಭದಲ್ಲಿ ನೀರುಪಾಲಾಗಿದ್ದು, ಪರಿಸರ ವಾಸಿಗಳು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಶೋಧ ನಡೆಸಿ ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಆಗಲೇ ಮೃತ ಪಟ್ಟಿದ್ದನು. ಚಂದೆರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.