News Karnataka Kannada
Sunday, May 05 2024
ಕಾಸರಗೋಡು

ಕಾಸರಗೋಡು :ತಲೆಕೆಳಗಾಗಿಸಿ ಧ್ವಜರೋಹಣ ನೆರೆವೇರಿಸಿ ಧ್ವಜಕ್ಕೆ ಅಗೌರವ

Flag
Photo Credit : News Kannada
ಕಾಸರಗೋಡು : ಗಣರಾಜ್ಯೋತ್ಸವ ದಂಗವಾಗಿ  ಕಾಸರಗೋಡು ನಗರಸಭಾ ಸ್ಟೇಡಿಯಂ ನಲ್ಲಿ  ನಡೆದ  ಜಿಲ್ಲಾ ಮಟ್ಟದ ಕಾರ್ಯ ಕ್ರಮದಲ್ಲಿ ತಲೆಕೆಳಗಾಗಿಸಿ ಧ್ವಜರೋಹಣ  ನೆರೆವೇರಿಸಿ  ಅಗೌರವ  ಹಾಗೂ ಮುಜುಗರಕ್ಕೆ ಒಳಗಾದ ಘಟನೆ ನಡೆದಿದೆ ,ಘಟನೆಯು  ವಿವಾದಕ್ಕೆ ಸಿಲುಕಿದೆ.
ತಪ್ಪು   ಅರಿವಾದ ಬಳಿಕ ಸರಿಪಡಿಸಿ ಬಳಿಕ ಆರೋಹಣ ಮಾಡಲಾಯಿತು.  ರಾಜ್ಯ ಬಂದರು ಸಚಿವ ಅಹಮ್ಮದ್ ದೇವರ್ ಕೋವಿಲ್ ಧ್ವಜಾರೋಹಣ   ನೆರವೇರಿಸಿದ್ದರು ಧ್ವಜ ವಂದನೆ ಸ್ವೀಕರಿಸಿದ  ಬಳಿಕವಷ್ಟೇ ಮಾಧ್ಯಮದವರು ಸಚಿವರ ಹಾಗೂ  ಅಧಿಕಾರಿಗಳ ಗಮನಕ್ಕೆ ತಂದ  ಬಳಿಕ ತಪ್ಪು ಅರಿವಾಗಿ   ಧ್ವಜವನ್ನು ಕೆಳಗಿಸಿ ಸರಿಪಡಿಸಿದ ಬಳಿಕ  ಆರೋಹಣ ಮಾಡಲಾಯಿತು .
ಧ್ವಜ ತೆಲೆಕೆಳಗಾಗಿಸಿ  ಹಾ ರಿದರೂ ಸಚಿವರು , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸರು ಮತ್ತು ಅಧಿಕಾರಿಗಳು   ಉಪಸ್ಥಿತರಿದ್ದರೂ ವಂದನೆ ಸ್ವೀಕರಿಸುವ ತನಕ ಗಮನಕ್ಕೆ ಬಂದಿರ ದಿರುವುದು    ಬಾರಿ ದೊಡ್ಡ ಲೋಪ ಕಂಡುಬಂದಿದೆ  . ಸಂಸದರು, ಶಾಸಕರು ಮೊದಲಾದ ಜನಪ್ರತಿನಿಧಿಗಳು ಉಪಸ್ಥಿತರಿದ್ದರು ಘಟನೆ ಬಳಿಕ ಸಚಿವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೆನಾ ಹಾಗೂ ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಎ . ಕೆ  ರಮೇ೦ದ್ರನ್   ರವರನ್ನು ರವರನ್ನು ಕರೆ ಸಿ   ಅತೃಪ್ತಿ  ಸೂಚಿಸಿದ್ದು, ತನಿಖೆಗೆ  ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಆದೇಶ ನೀಡಿದ್ದಾರೆ ಲೋಪದ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ  ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್   ಹಾಗೂ ಇತರ ನಾಯಕರು ಒತ್ತಾಯಿಸಿದ್ದಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು