ಕಾಸರಗೋಡು : ನಾಡಿಗಿಳಿದು ಕೃಷಿ ಹಾನಿ ಹಾಗೂ ಭಯದ ಉಂಟು ಮಾಡುತ್ತಿದ್ದ ಎರಡು ಕಾಡು ಹಂದಿಗಳ ನ್ನು ಅರಣ್ಯ ಇಲಾಖಾ ಅಧಿಕಾರಿಗಳು ಗುಂಡಿಟ್ಟು ಸಾಯಿಸಿದ್ದಾರೆ.
ಚಟ್ಟಂಚಾಲ್ ತೆಕ್ಕಿಲ್ ಮೊಹಿನಾಬಾದ್ ಅಶ್ರಫ್ ಎಂಬವರ ಕೃಷಿ ಸ್ಥಳಕ್ಕೆ ನುಗ್ಗಿ ಹಾನಿ ಉಂಟು ಮಾಡುತ್ತಿದ್ದ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿ ಹಂದಿಗಳನ್ನು ಕೊಂದು ಹಾಕಲಾಗಿದೆ. ಕೃಷಿ ಸ್ಥಳಕ್ಕೆ ನುಗ್ಗಿ ಹಾನಿ ಮಾಡುವ ಹಂದಿಗಳನ್ನು ಕೊಲ್ಲಲು ಕೇರಳದಲ್ಲಿ ಅನುಮತಿ ನೀಡಲಾಗಿದ್ದು, ಅರಣ್ಯ ಇಲಾಖೆ ಅನುಮತಿಯೊಂದಿಗೆ ಹಂದಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈಗಾಗಲೇ ಜಿಲ್ಲೆಯ ಹಲವೆಡೆಗಳಲ್ಲಿ 50 ಕ್ಕೂ ಅಧಿಕ ಕಾಡ ಹಂದಿಗಳನ್ನು ಕೊಲ್ಲಲಾಗಿದೆ.