ಕಾಸರಗೋಡು: ಕುಂಬಳೆ ಶಿರಿಯ ಹೊಳೆಯಲ್ಲಿ ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿದ ಕುಂಬಳೆ ಪೊಲೀಸರು 15 ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡು ಡಿ.ವೈ.ಎಸ್.ಪಿ.ಬಾಲಕೃಷ್ಣನ್ ನಾಯರ್ ಅವರ ನೇತೃತ್ವದಲ್ಲಿ ಕುಂಬಳೆ ಪೊಲೀಸರು, ಕರಾವಳಿ ರಕ್ಷಣಾ ಪಡೆ ಎಂಬಿವು ಗಳ ಜಂಟಿ ಆಶ್ರಯದಲ್ಲಿ ದಾಳಿ ನಡೆದಿದೆ. ಮರಳು ಸಾಗಾಟಕ್ಕೆ ನೇತೃತ್ವ ನೀಡುವವರ ವಿರುದ್ದ ಕೇಸು ದಾಖಲಿಸಲಾಗಿದೆ.