ಕಾಸರಗೋಡು : ಕಣ್ಣೂರು ವಿಮಾನ ನಿಲ್ದಾಣದಿಂದ ಸುಮಾರು 80 ಲಕ್ಷ ರೂ . ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದು , ಕಾಸರಗೋಡು ನಿವಾಸಿಯೋರ್ವನನ್ನು ಬಂಧಿಸಿದ್ದಾರೆ. ಕಾಸರಗೋಡು ಹಿದಾಯತ್ ನಗರ ದ ಅಬ್ದುಲ್ ತೌಫಿಕ್ ಬಂಧಿತ.
ಅಬುದಾಬಿಯಿಂದ ಬಂದಿಳಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬಂದಿಳಿದಿದ್ದನು . ಈತನ ತಂದಿದ್ದ ಮಿನಿ ಕೂಲರ್ ನಲ್ಲಿ ಚಿನ್ನವನ್ನು ಬಚ್ಚಿಟ್ಟು , ತಂದಿದ್ದು , ಅಧಿಕಾರಿಗಳು ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ .
ಸಂಶಯಗೊಂಡು ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ. ಕಣ್ಣೂರಿನಲ್ಲಿ ಒಂದೇ ದಿನ 1. 10 ಕೋಟಿ ರೂ . ಮೌಲ್ಯದ ಚಿನ್ನ ಪತ್ತೆಯಾಗಿದೆ.
ಇತರ ಎರಡು ಪ್ರಕಾರಗಳಲ್ಲಿ ಸುಮಾರು 30 ಲಕ್ಷ ರೂ . ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದ್ದು , ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಎಸೆದು ಹೋಗಿದ್ದ 268 ಗ್ರಾಂ ಹಾಗೂ ಕರ್ನಾಟಕ ನಿವಾಸಿಯೋರ್ವನಿಂದ 360 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ