ಕಾಸರಗೋಡು : ನಾಗರಿಕ ವಿತರಣಾ ವ್ಯವಸ್ಥೆಯನ್ನು ಪೂರ್ಣವಾಗಿ ಪಾರದರ್ಶಕ ಗೊಳಿಸುವುದು ಸರಕಾರದ ಗುರಿ ಎಂದು ಕೇರಳ ನಾಗರಿಕ ಪೂರೈಕೆ ಖಾತೆ ಸಚಿವ ಜಿ ಆರ್ ಅನಿಲ್ ಅಭಿಪ್ರಾಯ ಪಟ್ಟರು.
ಅವರು ಬುಧವಾರ ಕಾಸರಗೋಡಿನಲ್ಲಿ ಪಡಿತರ ಅಂಗಡಿಗಳ ಕುರಿತ ಅಹವಾಲು ಸ್ವೀಕಾರ ಸಮಾರಂಭದ ದಲ್ಲಿ ಹೇಳಿದರು.ಎಲ್ಲರಿಗೂ ಆಹಾರ ಖಾತರಿ ಪಡಿಸುವುದು ಸರಕಾರದ ಉದ್ದೇಶ ವಾಗಿದೆ.ಪ್ರಥಮ ಹಂತದಲ್ಲಿ ಅನರ್ಹರ ಕೈವಶ ಇರುವ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ಅರ್ಹರನ್ನು ಸೇರ್ಪಡೆ ಗೊಳಿಸಲಾಗುವುದು. ಜನವರಿ ತಿಂಗಳೊಳಗೆ ಎಲ್ಲಾ ಜಿಲ್ಲಾ – ತಾಲೂಕು ಕಚೇರಿಗಳಲ್ಲಿ ಫ್ರಂಟ್ ಆಫೀಸ್ ಆರಂಭಿಸ ಲಾಗುವುದು. ಗ್ರಾಹಕರ ದೂರುಗಳನ್ನು ಸ್ವೀಕರಿಸಿ ಅಗತ್ಯ ಕ್ರಮ ತೆಗೆದು ಕೊಳ್ಳ ಲಾಗುವುದು. ನಾಗರಿಕ ಪೂರೈಕೆ ಇಲಾಖಾ ಕಚೇರಿಗಳನ್ನು ಪೂರ್ಣ ಕಂಪ್ಯೂಟರಿಕರಣ ಗೊಳಿಸಲಾಗುವುದು. ಅಳತೆ , ತೂಕ ದಲ್ಲಿ ವಂಚನೆ ನಡೆಯದಂತೆ ಗುಣಮಟ್ಟದ ಆಹಾರ ಧಾನ್ಯ ಗಳ ನ್ನು ವಿತರಿಸುವ ನಿಟ್ಟಿಯಲ್ಲಿ ಗಮನ ಹರಿಸಲಾಗುವುದು ಎಂದು ಸಚಿವರು ಹೇಳಿದರು.
ಗೋದಾಮು ಗಳಲ್ಲಿನ ಸಮಸ್ಯೆ ಗಳ ನ್ನು ಶೀಘ್ರ ಪರಿಹರಿಸಲಾಗುವುದು. ರಾಜ್ಯ ಸರಕಾರದ ಪ್ರಥಮ ವರ್ಷ ಪೂರ್ಣ ಗೊಳ್ಳುವ ಮೊದಲು ರಾಜ್ಯದ ಎಲ್ಲಾ ಪಡಿತರ ಅಂಗಡಿಗಳನ್ನು ನವಿಕರಿ ಲಾಗುವುದು. ಸ್ವಚ್ಛತೆ ಹಾಗೂ ಆಹಾರ ಧಾನ್ಯ ಸಂಗ್ರಹಣೆಗೆ ಅಗತ್ಯ ವ್ಯವಸ್ಥೆ ಗಳ ನ್ನು ತೆಗೆದು ಕೊಳ್ಳ ಲಾಗುವುದು ಎಂದು ಸಚಿವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭ ದಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ , ನಾಗರಿಕ ಪೂರೈಕೆ ಇಲಾಖಾ ರಾಜ್ಯ ನಿರ್ದೇಶಕ ಡಾ. ಡಿ. ಸಜಿತ್ ಬಾಬು ವಲಯ ರೇಶ ನಿಂಗ್ ಉಪ ನಿಯಂತ್ರಕ ಕೆ. ಮನೋಜ್ ಕುಮಾರ್, ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ಅನಿಲ್ ಕುಮಾರ್ ಉಪಸ್ಥಿತತಿದ್ದರು.