ಮಂಗಳೂರು: ಕಾರ್ಪೊರೇಟ್ ವರ್ಗದ ಸಿಬ್ಬಂದಿಗಳಿಗೆ ಕರ್ಣಾಟಕ ಬ್ಯಾಂಕ್ ‘ಕೆಬಿಎಲ್ ಸ್ಯಾಲರಿ ಅಲ್ಟಿಮೇಟ್’, ‘ಕೆಬಿಎಲ್ ಸ್ಯಾಲರಿ ಡಿಲೈಟ್’ ಮತ್ತು ‘ಕೆಬಿಎಲ್ ಸ್ಯಾಲರಿ ಪ್ರೈಡ್’ ಎನ್ನುವ ಮೂರು ವಿವಿಧ ಉಳಿತಾಯ ಖಾತೆಯ ಪ್ರಾರಂಭಿಸಿದೆ. ಕಾರ್ಪೊರೇಟ್ ವರ್ಗದಲ್ಲಿ ಸಂಬಳ ಪಡೆಯುವ ಉದ್ಯೋಗಿಗಳ ಆರ್ಥಿಕ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಈ ವಿಶೇಷ ಅಕೌಂಟ್ ಗಳನ್ನು ವಿನ್ಯಾಸಗೊಳಿಸಲಾಗಿದೆ.
ಈ ಹೊಸ ಉಳಿತಾಯ ಖಾತೆ ಯೋಜನೆಗಳು ವಿವಿಧ ಪ್ರಯೋಜನಗಳನ್ನು ಮತ್ತು ವೈಶಿಷ್ಟ್ಯಗಳ ಶ್ರೇಣಿಯನ್ನು ಗ್ರಾಹಕರಿಗೆ ನೀಡುತ್ತವೆ. ಸಂಬಳ ಪಡೆಯುವ ಗ್ರಾಹಕರಿಗೆ ತಮ್ಮ ಹಣಕಾಸುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಉಳಿತಾಯ ಯೋಜನೆಗಳು ತುಂಬಾ ಸಹಕಾರಿಯಾಗಲಿದೆ.
ಹೊಸ ಉಳಿತಾಯ ಖಾತೆಗಳನ್ನು ಅನಾವರಣಗೊಳಿಸಿ ಮಾತನಾಡಿದ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಶ್ರೀ ಶ್ರಿಕೃಷ್ಣನ್ ಹೆಚ್, “ಈ ನೂತನ ಉಳಿತಾಯ ಖಾತೆಗಳು ಕರ್ಣಾಟಕ ಬ್ಯಾಂಕ್, ‘ಬ್ಯಾಂಕ್ ಆಫ್ ಪ್ಯೂಚರ್ (ಭವಿಷ್ಯದ ನೆಚ್ಚಿನ ಬ್ಯಾಂಕ್)’ ಆಗುವ ನಮ್ಮ ಧೈಯಕ್ಕೆ ಅನುಗುಣವಾಗಿ, ಗ್ರಾಹಕರ ಆರ್ಥಿಕ ಮತ್ತು ಜೀವನಶೈಲಿಯ ಅಗತ್ಯಗಳಿಗೆ ಸಂಬಂಧಿಸಿ ಮಾಡಿದ ವಿಶಿಷ್ಟ ಗ್ರಾಹಕಸ್ನೇಹಿ ಡಿಜಿಟಲ್ ಪ್ರೋಡಕ್ಟ್ ಆಗಿದೆ. ಈ ಖಾತೆದಾರರು ರೂ. 50 ಲಕ್ಷ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಬಹುದು.
ಪ್ರೀಮಿಯಂ ಡೆಬಿಟ್ ಕಾರ್ಡ್ ಸೌಲಭ್ಯದೊಂದಿಗೆ ಅಂತರಾಷ್ಟ್ರೀಯ ಮತ್ತು ದೇಶೀಯ ವಿಮಾನ ನಿಲ್ದಾಣದ ವಿಶ್ರಾಂತಿ ಕೋಣೆಗಳಿಗೆ (ಲಾಂಜ್) ಪ್ರವೇಶವನ್ನೂ ಪಡೆಯಬಹುದು.
ಕಾರ್ಪೊರೇಟ್ ಸಂಬಳ ಪಡೆಯುವ ವೃತ್ತಿಪರರಿಗೆ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಗಳನ್ನು ಹೊಂದಬಹುದಲ್ಲದೆ ಗೃಹ ಹಾಗೂ ವಾಹನ ಸಾಲಗಳ ಮೇಲಿನ ಸಂಸ್ಕರಣಾ ಶುಲ್ಕಗಳಲ್ಲೂ ರಿಯಾಯಿತಿ ಸೌಲಭ್ಯವಿದೆ. ಎರಡು ಲಕ್ಷ ರೂಪಾಯಿವರೆಗಿನ ಆಭರಣ ವಿಮಾ ಸೌಲಭ್ಯವೂ ಸೇರಿದಂತೆ ಇನ್ನೂ ಅನೇಕ ವಿಶಿಷ್ಟ ಸೌಲಭ್ಯಗಳಿವೆ. ಈ ವಿಶಿಷ್ಟ ಸ್ಯಾಲರಿ ಖಾತೆಗಳು ಗ್ರಾಹಕರ ಆಶೋತ್ತರಗಳನ್ನು ಪೂರೈಸುವುದರಲ್ಲಿ ಯಾವುದೇ ಸಂಶಯವಿಲ್ಲʼ ಎಂದು ನುಡಿದರು.
ಈ ಸಂದರ್ಭದಲ್ಲಿ ಬ್ಯಾಂಕ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಶೇಖರ್ ರಾವ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.