News Karnataka Kannada
Sunday, April 28 2024
ಮಂಗಳೂರು

ಪರಶುರಾಮ ಕಂಚಿನ ಪ್ರತಿಮೆ ವಿಚಾರ ಅಸಲಿ-ನಕಲಿ ಪ್ರತಿಪಾದಕರ ಮೇಲೇ ಎಫ್‌ ಐ ಆರ್

Karkal
Photo Credit : News Kannada

ಮಂಗಳೂರು: ಕಾರ್ಕಳ ಪರಶುರಾಮ ಕಂಚಿನ ಪ್ರತಿಮೆ ನಕಲಿ ವಿಚಾರಕ್ಕೆ ಸಂಬಂಧಸಿದಂತೆ ಅಸಲಿ -ನಕಲಿ ಪ್ರತಿಪಾದಕರ ನಡುವೆ ಇದೀಗ ಎಫ್ ಐ ಆರ್ ಜಟಾಪಟಿ ಶುರುವಾಗಿದೆ.

ಅಸಲಿ -ನಕಲಿ ಎಂದು ಸಾಬೀತುಪಡಿಸಲು ಮುಂದಾಗಿದ್ದ ಎರಡು ತಂಡಗಳ ಮೇಲೂ ಎಫ್ ಐ ಆರ್ ದಾಖಲಾಗಿದೆ. ರಿಯಾಲಿಟಿ ಚೆಕ್ ನೆಪದಲ್ಲಿ ಪರಶುರಾಮನ ಮೂರ್ತಿಗೆ ಬಿಜೆಪಿ ಕಾರ್ಯಕರ್ತರು ಸುತ್ತಿಗೆಯಿಂದ ಬಡಿದಿದ್ದಾರೆ. ಇದು ಅಸಲಿ ಕಂಚಿನ ಪ್ರತಿಮೆ ಎಂದು ಸಾಬೀತು ಪಡಿಸಲು ಬಿಜೆಪಿ ಕಾರ್ಯಕರ್ತರಿಂದ ನಡೆದಿದ್ದ ಸತ್ಯ ಶೋಧನೆಯಾಗಿತ್ತು. ಪ್ರತಿಮೆಯ ಕಾಲ ಬುಡದ ಹಲವು ಭಾಗಗಳಿಗೆ ಸುತ್ತಿಗೆಯಿಂದ ಬಡಿದು ರಿಯಾಲಿಟಿ ಚೆಕ್ ಮಾಡಿದ್ದಾರೆ. ಇದರಲ್ಲಿ ಸುಹಾಸ್‌, ಮಹಾವೀರ, ಸುಮಿತ್‌, ವಿಖ್ಯಾತ್‌, ಮುಸ್ತಾಫ‌, ರಾಕೇಶ್‌, ಸಮೃದ್ದಿ ಹಾಗೂ ಇತರರ ವಿರುದ್ಧ ಏಳು ಮಂದಿಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಸಾರ್ವಜನಿಕ ಆಸ್ತಿ ನಷ್ಟ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ಆಧಾರದಲ್ಲಿ ಸಮಾನ ಮನಸ್ಕರರ ಹೋರಾಟ ಸಮಿತಿ ಮುಖಂಡೆ ದಿವ್ಯಾ ನಾಯಕ್ ರಿಂದ IPC 1860(U/s 295,427,34)ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಥೀಮ್ ಪಾರ್ಕ್ ಗೆ ಭೇಟಿ ನೀಡಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೂ ಎಫ್ ಐ ಆರ್ ದಾಖಲಾಗಿದೆ. ಅಕ್ರಮ ಪ್ರವೇಶ ಹಾಗೂ ಪ್ರತಿಮೆಗೆ ಅಳವಡಿಸಿದ್ದ ಟಾರ್ಪಲ್ ಹರಿದ ವಿರುದ್ಧ ಸೇರಿದಂತೆ 14 ಜನ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಸಮಾನ ಮನಸ್ಕರರ ಸಮಿತಿ ಮುಖಂಡೆ ದಿವ್ಯಾ ನಾಯಕ್ ರನ್ನೂ ಸೇರಿಸಿ ಎಫ್ ಐ ಆರ್ ದಾಖಲಿಸಲಾಗಿದೆ. ಅಕ್ರಮ ಪ್ರವೇಶಕ್ಕೆ ಸಂಬಂಧಿಸಿದ ಇನ್ನೊಂದು ಪ್ರಕರಣದಲ್ಲಿ ಶುಭದ ರಾವ್‌, ದೀಕ್ಷಿತ್‌, ದೀಪಕ್‌, ಸುಬಿತ್‌, ವಿವೇಕಾನಂದ, ಯೋಗೀಶ, ಸೂರಜ್‌, ಪ್ರದೀಪ್‌, ಅಲ್ಪಾಜ್‌, ಐವಾನ್‌, ದಿವ್ಯಾ, ಕೃಷ್ಣ, ಹರೀಶ್‌ ಹಾಗೂ ಇತರರ ವಿರುದ್ಧ ಬಿಜೆಪಿ ಕಾರ್ಯಕರ್ತ ಸುನೀಲ್ ಎಂಬುವವರ ದೂರಿನನ್ವಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು