ಮಂಗಳೂರು: ಹಳೆ ವೈಷಮ್ಯದಿಂದ ಯುವಕರ ಗುಂಪುಗಳ ಮಧ್ಯೆ ನಡೆದ ಜಗಳವು ಕೊಲೆಯಲ್ಲಿ ಪ್ರಯಾಪ್ತವಾದ ಘಟನೆಯು ಬಜಪೆ ಠಾಣಾ ವ್ಯಾಪ್ತಿಯಾ ಕಟೀಲು ಸಮೀಪದ ಎಕ್ಕಾರಿನಲ್ಲಿ ನಡೆದಿದೆ.
ಭಾನುವಾರ ರಾತ್ರಿ ವೇಳೆ ಎಕ್ಕಾರು ಅರಸುಗುಡ್ಡೆಯಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಮಾರಾಮಾರಿಯಲ್ಲಿ ಮರಕಡ ನಿವಾಸಿ ಕೀರ್ತನ್(20) ಎಂಬಾತನ ಕೊಲೆಯಾಗಿದೆ. ಆತನ ಸಹಚರರಾದ ನಿತಿನ್(20) ಮತ್ತು ಮಹೇಶ್(20) ಗಾಯಗೊಂಡಿರುವರು.
ಕೀರ್ತನ್ ಮತ್ತು ಇನ್ನೊಂದು ಗುಂಪಿನ ಮಧ್ಯೆ ಹಳೆ ದ್ವೇಷ ಇತ್ತು ಎನ್ನಲಾಗಿದೆ. ಭಾನುವಾರ ರಾತ್ರಿ ಅರಸುಗುಡ್ಡೆಯಲ್ಲಿ ಸೇರಿದ ಕೀರ್ತನ್ ಮತ್ತು ಆತನ ಸಹಚರರು ಎದುರಾಳಿಗಳಿಗೆ ಕರೆ ಮಾಡಿ ಅಲ್ಲಿಗೆ ಬರುವಂತೆ ಆಹ್ವಾನ ನೀಡಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಎರಡು ಗುಂಪುಗಳು ಮಾತಿನ ಚಕಮಕಿ ಬಳಿಕ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದು. ಕೀರ್ತನ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.