News Karnataka Kannada
Saturday, May 18 2024
ಕರ್ನಾಟಕ

ಪಶ್ಚಿಮ ಬಂಗಾಳಕ್ಕೆ ಮರಳಿದ 1309 ವಲಸೆ ಕಾರ್ಮಿಕರು

Photo Credit :

ಪಶ್ಚಿಮ ಬಂಗಾಳಕ್ಕೆ ಮರಳಿದ 1309 ವಲಸೆ ಕಾರ್ಮಿಕರು

ಕಾರವಾರ: ಪಶ್ಚಿಮ ಬಂಗಾಳದಿಂದ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಮಂಗಳೂರು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದ 1309 ಜನ ವಲಸೆ ಕಾರ್ಮಿಕರನ್ನು ಉತ್ತರ ಕನ್ನಡ ಜಿಲ್ಲಾಡಳಿತದ ವತಿಯಿಂದ ಉಚಿತವಾಗಿ ವಿಶೇಷ ಶ್ರಮಿಕ ರೈಲಿನ ವ್ಯವಸ್ಥೆ ಮಾಡಿ ಮರಳಿ ಪಚ್ಚಿಮ ಬಂಗಾಳ ರಾಜ್ಯಕ್ಕೆ ಕಳುಹಿಸಿಕೊಡಲಾಯಿತು.

ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಜೀವನ ನಿರ್ವಹಣೆಗೆಂದು ಕೆಲಸವನ್ನು ಅರಿಸಿ ಬಂದಿದ್ದ, ಉಡುಪಿ ಜಿಲ್ಲೆಯ 250, ಮಂಗಳೂರು 73, ಚಿಕ್ಕಮಗಳೂರು 96 ಉತ್ತರ ಕನ್ನಡ ಜಿಲ್ಲೆಯ 890 ಒಟ್ಟು 1309 ಜನ ವಲಸೆ ಕಾರ್ಮಿಕರನ್ನು ಉತ್ತರ ಕನ್ನಡ ಜಿಲ್ಲಾಡಳಿತದಿಂದಲೇ ಖರ್ಚು ಭರಿಸಿ ಸೋಮವಾರ ಕಾರವಾರ ಶಿರವಾಡಾ ರೈಲು ನಿಲ್ದಾಣದಿಂದ ಮಧ್ಯಾಹ್ನ 2.30ಕ್ಕೆ ವಿಶೇಷ ಶ್ರಮಿಕ ಕೊಂಕಣ ರೈಲ್ವೆ ಮೂಲಕ ಕಳುಹಿಸಲಾಯಿತು.

ಜಿಲ್ಲಾಡಳಿತವು ಈ ಎಲ್ಲ ವಲಸೆ ಕಾರ್ಮಿಕರಿಗೆ ವಿಶೇಷ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಅವರಿಗೆ ಪ್ರಮಾಣ ಪತ್ರ ಮತ್ತು ಮಾಸ್ಕ ಸ್ಯಾನಿಟೈಜರ್ ವಿತರಿಸುವದರೊಂದಿಗೆ ನೀರು ಮತ್ತು ಊಟದ ವ್ಯವಸ್ಥೆಯನ್ನು ಮಾಡಿ ಕಳುಹಿಸಿದೆ.

ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರನ್ನು ವಿಶೇಷ ಶ್ರಮಿಕ ರೈಲಿನ ಮೂಲಕ ಕಳುಹಿಸಿಕೊಡಲು ಖುದ್ದು, ಜಿಲ್ಲಾಧಿಕಾರಿ ಡಾ ಹರೀಶ ಕುಮಾರ ಕೆ, ಕಾರವಾರ ಉಪವಿಭಾಗಾಧಿಕಾರಿ ಪ್ರಿಯಾಂಗಾ ಎಂ. ಕೊಂಕಣ ರೈಲ್ವೆ ಪ್ರಾದೇಶಿಕ ಅಧಿಕಾರಿ ಬಿ. ಬಿ. ನಿಕಮ್, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ ಬಿ ಆರ್. ಸಮಾಜ ಕಲ್ಯಾಣಾಧಿಕಾರಿ ಎಸ್ ಪುರುಷೋತ್ತಮ ಸೇರಿದಂತೆ ಇತರರು ರೈಲ್ವೆ ನಿಲ್ದಾಣದಲ್ಲಿ ಹಾಜರಿದ್ದು ಎಲ್ಲರಿಗೂ ಶುಭ ಹಾರೈಸಿ ಕಳುಹಿಕೊಟ್ಟರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು