ಪುತ್ತೂರು: 5 ವರ್ಷದ ಹಿಂದೆ ಸುಬ್ರಹ್ಮಣ್ಯ ಬಸ್ನಿಾಲ್ದಾಣದಲ್ಲಿ ನಿರ್ವಾಹಕಿಗೆ ಆಕೆಯ ಪತಿ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪತಿ ಬಿಜಾಪುರದ ರಾಮನಗರ ನಿವಾಸಿ ಮೋಹನ್ ಅವರ ಪುತ್ರ ಪ್ರಕಾಶ್ ವಲ್ಲಾಪುರ(36ವ)ರವರ ಮೇಲಿನ ಆರೋಪ ಸಾಬೀತಾಗಿದ್ದು, ಪತಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ರೂ. 10ಸಾವಿರ ದಂಡ ವಿಧಿಸಿ ಪುತ್ತೂರು 5ನೇ ಹೆಚ್ಚುವರಿ ಸತ್ರ ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2014ರ ಮಾ.19ರಂದು ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಅರೋಪಿ ಪ್ರಕಾಶ್ ವಲ್ಲಾಪುರ ಅವರು ಬಸ್ನಮಲ್ಲಿದ್ದ ತನ್ನ ಪತ್ನಿ ನಿರ್ವಾಹಕಿ ಇಂದಿರಾ ರ್ಯಾಗಿ ಅವರಿಗೆ ಚೂರಿಯಿಂದ ತಿವಿದು ಗಂಭೀರ ಗಾಯಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಜೈಲು ಶಿಕ್ಷೆ ವಿಧಿಸಿದೆ.
ಘಟನೆ ವಿವರ: ಗುತ್ತಿಗೆ ಅಧಾರದಲ್ಲಿ ಮೆಸ್ಕಾಂ ಬಿಲ್ ರೀಡಿಂಗ್ ಕೆಲಸ ನಿರ್ವಹಿಸುತ್ತಿದ್ದ ಪ್ರಕಾಶ್ ಅವರು ಧರ್ಮಸ್ಥಳ ಡಿಪೋದ ಬಸ್ ನಿರ್ವಾಹಕಿಯಾಗಿರುವ ಇಂದಿರಾ ರ್ಯಾಗಿ ಅವರನ್ನು 2013ರಲ್ಲಿ ವಿವಾಹವಾಗಿದ್ದು, ಉಜಿರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. ಕಾಲಕ್ರಮೇಣ ಪ್ರಕಾಶ್ ಅವರು ಕೆಲಸಕ್ಕೆ ಹೋಗದೆ ಪತ್ನಿಯನ್ನು ಬೆದರಿಸಿ ಆಕೆಯ ಸಂಬಳವನ್ನು ಕೇಳಿ ಪಡೆಯುತ್ತಿದ್ದರು. 2014ರ ಮಾ.19ರಂದು ಇಂದಿರಾ ರ್ಯಾಗಿ ಅವರು ನಿರ್ವಾಹಕಿಯಾಗಿ ಧರ್ಮಸ್ಥಳದಿಂದ ಸುಳ್ಯ, ಕಾಸರಗೋಡು ಹೋಗಿ ಹಿಂದಿರುಗುವ ಬಸ್ನವಲ್ಲಿ ತೆರಳಿದ್ದರು. ಸಂಜೆ ಬಸ್ ಸುಬ್ರಹ್ಮಣ್ಯ ಬಸ್ನಿಸಲ್ದಾಣಕ್ಕೆ ಬಂದಿತ್ತು. ಅದೇ ಬಸ್ನ ಲ್ಲಿ ನಿರ್ವಾಹಕಿ ಇಂದಿರಾ ರ್ಯಾಗಿ ಅವರ ಪತಿ ಪ್ರಕಾಶ್ ಕೂಡಾ ಇದ್ದರು.
ಪ್ರಯಾಣಿಕರು ಎಲ್ಲರೂ ಬಸ್ನ.ಲ್ಲಿ ಇಳಿದ ಬಳಿಕ ಪ್ರಕಾಶ್ ಅವರು ಬಸ್ನನಲ್ಲಿದ್ದ ಪತ್ನಿಯ ಬಳಿಗೆ ಹೋಗಿ ಪತ್ನಿಯ ಎದೆಯ ಮಧ್ಯ ಭಾಗ, ಬಲ ಕಾಲಿನ ತೊಡೆ, ಕೆನ್ನೆಗೆ ಚೂರಿಯಿಂದ ಇರಿದಿದ್ದರು. ಗಂಭೀರ ಗಾಯಗೊಂಡ ಇಂದಿರಾರ್ಯಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆರೋಪಿ ಪ್ರಕಾಶ್ ಅವರನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿ ಆಗಿನ ಠಾಣಾ ಇನ್ಸ್ಪೆೆಕ್ಟರ್ ಮಹದೇವ ಶೆಟ್ಟಿಯವರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪಿ ಮೇಲಿನ ಆರೋಪ ಸಾಬೀತಾಗಿದ್ದು, ಮಾ.21ರಂದು ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಆರೋಪಿ ಮೇಲಿನ ಪ್ರಕರಣ ಸೆಕ್ಷನ್ 498(ಎ) ಗೆ 1 ವರ್ಷ ಜೈಲು, ರೂ. 4ಸಾವಿರ ದಂಡ, ಸೆಕ್ಷನ್ 337ಕ್ಕೆ 7 ವರ್ಷ ಜೈಲು ಮತ್ತು ರೂ. 5ಸಾವಿರ ದಂಡ, ಸೆಕ್ಷನ್ 307ಗೆ 7 ವರ್ಷ ಜೈಲು ಮತ್ತು ರೂ. 10ಸಾವಿರ ದಂಡ ವಿಧಿಸಿ ನ್ಯಾಯಾಧೀಶ ಶಿವಣ್ಣ ಅವರು ತೀರ್ಪು ನೀಡಿದ್ದಾರೆ. ಪ್ರಕರಣದ ವಿಚಾರಣೆಯ ಹಂತದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಆಗಿನ ಸರಕಾರಿ ಅಭಿಯೋಜಕ ಉದಯ ಕುಮಾರ್ ವಾದ ಮಂಡನೆ ಮಾಡುತ್ತಿದ್ದರು. ಇದೀಗ ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ವಾದಿಸಿದರು.