ಮೂಡುಬಿದಿರೆ: ಈ ಬಜೆಟ್ ದೇಶದ ಪ್ರಗತಿಗೆ ಪೂರಕವಾಗಿದ್ದು ದೇಶದ ಆರ್ಥಿಕತೆಯತ್ತ ಗಮನವಿರಿಸಿ ದೂರದೃಷ್ಟಿಯ ಚಿಂತನೆಯಿಂದ ಮಂಡಿಸಲಾದ ಬಜೆಟ್ ಇದಾಗಿದೆ ಎಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಪ್ರತಿಕ್ರಿಸಯಿಸಿದರು.
ಉಜ್ವಲಾ, ಸ್ವಚ್ಛ ಭಾರತ್, ಆಯುಷ್ಮಾನ್ಭಮವದಂಥ ಯೋಜನೆಗಳ ಮೂಲಕ ದೇಶದ ಎಲ್ಲ ಜನಸಮುದಾಯಗಳನ್ನು ಪ್ರಗತಿಯತ್ತ ಒಯ್ಯುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಪ್ರಧಾನಿ ಮೋದಿ ಅವರು ಉಡಾನ್ ಯೋಜನೆಯ ಮೂಲಕ ದೇಶದಲ್ಲಿ 100ಕ್ಕೂ ಅಧಿಕ ವಿಮಾನನಿಲ್ದಾಣಗಳನ್ನು ನಿರ್ಮಿಸುವ, ರೈಲ್ವೇ, ರಕ್ಷಣ ಖಾತೆಗಳಿಗೆ ವಿಶೇಷ ಅನುದಾನ ನೀಡುವ ಯೋಜನೆಗಳ ಮೂಲಕ ಭಾರತ ಜಗತ್ತಿನಲ್ಲೇ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿದ್ದಾರೆ.
ರೂ. 5 ಲಕ್ಷದ ವರೆಗೆ ಆದಾಯ ತೆರಿಗೆ ಮಿತಿಯನ್ನು ಕಲ್ಪಿಸುವ ಮೂಲಕ ನೌಕರರು, ಮಧ್ಯಮವರ್ಗದವರ ಏಳಿಗೆಗೆ ಹಾದಿ ತೆರೆದ ಬಜೆಟ್ ಇದಾಗಿದೆ ಎಂದರು.