Categories: ಕರಾವಳಿ

ವಿದ್ಯಾರ್ಥಿನಿಯರಲ್ಲಿ ಸ್ವಯಂ ಜಾಗೃತಿ ಅಗತ್ಯ: ಡಿವೈಸ್ಪಿ ದಿನಕರ್ ಶೆಟ್ಟಿ

ಪುತ್ತೂರು: ಹುಟ್ಟಿನಿಂದ ಸಾವಿನ ತನಕ ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಾನೂನಿನ ವ್ಯವಸ್ಥೆ ಇದೆ. ಆದರೂ ಕಾನೂನು ಇರುವುದು ಅಪರಾಧ ಆದ ಬಳಿಕ. ಈ ನಿಟ್ಟಿನಲ್ಲಿ ತಮಗೆ ಆಗಿರುವ ತೊಂದರೆಯನ್ನು ಭಯ ಪಟ್ಟು ತಮ್ಮಲ್ಲೆ ಮುಚ್ಚಿಟ್ಟು ಇಲ್ಲದ ಸಮಸ್ಯೆಗಳನ್ನೂ ತಂದುಕೊಳ್ಳಬೇಡಿ. ಇದಕ್ಕಿಂದ ಸ್ವಯಂ ಜಾಗೃತಿ ಅಗತ್ಯ. ಎಲ್ಲಾ ಹಂತದಲ್ಲೂ ಮೈಯೆಲ್ಲಾ ಕಣ್ಣಾಗಿ ಜಾಗೃತರಾಗಿರಿ, ಎಷ್ಟೆ ದೊಡ್ಡ ಸ್ನೇಹಿತರಾದರೂ ನೂರಕ್ಕೆ ನೂರು ನಂಬಬೇಡಿ ಎಂದು ಡಿವೈಎಸ್ಪಿ ದಿನಕರ್ ಶೆಟ್ಟಿಯವರು ಹೇಳಿದರು.

ಕಾಲೇಜಿನ ಆಂತರಿಕ ಗುಣಮಟ್ಟ ಮೌಲ್ಯವರ್ಧನ ಸಂಘದ ಆಶ್ರಯದಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಪೊಲೀಸ್ ಇಲಾಖೆ ವತಿಯಿಂದ ಜು.10ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದ ಡಿವೈಎಸ್ಪಿ ದಿನಕರ್ ಶೆಟ್ಟಿಯವರು ಮಾತನಾಡಿ ಪೋಷಕರು ಮಕ್ಕಳ ಕುರಿತು ಬೆಟ್ಟದಷ್ಟು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಮೊದಲು ತಂದೆ-ತಾಯಿ ನಮ್ಮ ಮೇಲೆ ಇಟ್ಟಿರುವ ಕಾಳಜಿಯನ್ನು ಅರಿತುಕೊಳ್ಳಬೇಕು. ಯಾವುದಕ್ಕೆ ಮಹತ್ವ ನೀಡಬೇಕು ಎನ್ನುವುದು ನಮಗೆ ತಿಳಿದಿರಬೇಕು. ಹೆಣ್ಣು ಮಗು ಭೂಮಿ ಕಾಲಿಟ್ಟಲ್ಲಿಂದ, ವಯೋಸಹಜ ಸಾವಿನ ತನಕವೂ ಅವರ ರಕ್ಷಣೆಗೆ ಕಾನೂನು ಇದೆ. ಆದರೆ ಒಬ್ಬ ಅಪರಾಧಿಗೆ ಶಿಕ್ಷೆ ನೀಡಲಾಗುತ್ತದೆ ಆದರೂ ಆತನ ಕೃತ್ಯದಿಂದ ಸಂತ್ರಸ್ತರು ಸಾಕಷ್ಟು ನಷ್ಟ ಹೊಂದಿರುತ್ತಾರೆ. ಆತನ ಜೀವನದ ಅಮೂಲ್ಯ ಸಮಯ ಕಳೆದು ಕೊಂಡಿರುತ್ತಾನೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಓದಿನ ಜೀವನದಲ್ಲಿ ಬಹಳಷ್ಟು ಜಾಗ್ರತೆಯಿಂದ ಇರಬೇಕು. ಓದಿನೊಂದಿಗೆ ಬೇರೆ ಬೇರೆ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂದರು.

ಪರಿಚಯಸ್ಥರ ನಂಬಿಕೆಯಲ್ಲಿ ಎಚ್ಚರವಿರಲಿ: ಸ್ನೇಹಿತರು, ಪರಿಚಯಸ್ಥರೊಂದಿಗೆ ಪಾರ್ಟಿಯಲ್ಲಿ ಎಂಜಾಯ್, ಅಪರಿಚಿತರ ಮನೆಗೆ ಹೋಗುವುದಾಗಲಿ ಅಥವಾ ಏಂತಹ ದೊಡ್ಡ ಸ್ನೇಹಿತರಾಗಲಿ ಹೊರಗಡೆ ಹೋಗುವಾಗ ನೂರಕ್ಕೆ ನೂರು ನಂಬುವುದು ಬೇಡ. ಬಹಳಷ್ಟು ಅಪರಾಧಗಳು ಇಂತಹ ಸಂದರ್ಭದಲ್ಲೇ ನಡೆಯುತ್ತವೆ ಎಂದ ಡಿವೈಎಸ್ಪಿ ದಿನಕರ್ ಶೆಟ್ಟಿಯವರು ಕೆಲವೊಂದು ಉದಾಹರಣೆಯನ್ನು ವಿವರಿಸಿದರು.

ದೂರು ನೀಡಿದರೆ ಹೆಸರು ಗೌಪ್ಯ: ಶೋಷಣೆ, ತೊಂದರೆ ಒಳಗಾದ ವಿದ್ಯಾರ್ಥಿನಿಯರು ತಕ್ಷಣ ದೂರು ನೀಡಿ. ತಮ್ಮ ಸಮಸ್ಯೆಗಳಿಗೆ ಹೆದರಿ ಸುಮ್ಮನಿರುವುದು ಬೇಡ. ಯಾರಿಗೆ ತೊಂದರೆ ಆಗಿದೆಯೋ ಅವರ ಹೆಸರನ್ನು ಗೌಪ್ಯವಾಗಿರಿಸಲಾಗುವುದು. ಅದೂ ಅಲ್ಲದೆ ಈ ಕುರಿತು ಮಾದ್ಯಮ ಪತ್ರಿಕೆಗಳು ಸಹ ಹೆಸರನ್ನು ಪ್ರಕಟಿಸುವುದಿಲ್ಲ ಎಂದ ಡಿವೈಎಸ್ಪಿಯವರು ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರಂಭದಲ್ಲೇ ದೂರು ನೀಡುತ್ತಿದ್ದರೆ ವೀಡಿಯೋ ಪ್ರಚಾರ ಆಗುವುದನ್ನು ತಪ್ಪಿಸಬಹುದಿತ್ತು ಎಂದರು.

ಖಾಸಗಿತನವನ್ನು ಹಂಚಿಕೊಳ್ಳಬೇಡಿ; ಮೊಬೈಲ್ ಬಂದ ಬಳಿಕ ಖಾಸಗಿ ಬದುಕು ಹೋಗಿದೆ. ನೇರವಾಗಿ ಮಾತನಾಡದೆ ಮೊಬೈಲ್ ಮೂಲಕ ಮಾತನಾಡುವಾಗ ನಮ್ಮ ಎಲ್ಲಾ ವಿಚಾರಗಳು ಎಷ್ಟೋ ಸರ್ವರ್ ಗಳ ಮೂಲಕ ಹಾದು ಹೋಗುತ್ತವೆ. ನೀವು ಮೊಬೈಲ್‍ನಲ್ಲಿ ಚಾಟ್ ಮಾಡಿದು ಎಲ್ಲಿಯೋ ಒಂದು ಕಡೆ ಸೇವ್ ಆಗಿರುತ್ತದೆ. ಮೊಬೈಲ್‍ನಲ್ಲಿ ಪರಿಚಯಸ್ತರಲ್ಲೂ ಎನಾದರೂ ಹಂಚಿಕೊಳ್ಳುವಾಗ ಬಹಳ ಎಚ್ಚರ ವಹಿಸಬೇಕು. ನಂಬಿಕೆಯಿಂದ ಮೋಸ ಹೋಗದಿರಿ ಎಂದ ಡಿವೈಎಸ್ಪಿಯವರು ನಮ್ಮ ಇಲಾಖೆಗೆ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಶಿಕ್ಷಕಿಸುವುದು ದೊಡ್ಡ ವಿಚಾರವಲ್ಲ. ಆದರೆ ಚಿಕ್ಕ ವಯಸ್ಸಿನ ಅಪರಾಧಿಗಳ ಭವಿಷ್ಯವೇನು ಎಂಬ ಚಿಂತೆ ಕಾಡುತ್ತದೆ ಎಂದರು. ವೇದಿಕೆಯಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಎಸ್.ಐ ಸೇಸಮ್ಮ, ಕಾಲೇಜಿನ ಪ್ರಾಂಶುಪಾಲ ಪೆÇ್ರ| ಝೇವಿಯರ್ ಡಿಸೋಜ, ಪ್ರೊ.ಐವನ್ ಪ್ರಾನ್ಸಿಸ್ ಲೋಬೊ, ಪ್ರೊ. ಜಯರಾಮ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರೋ.| ಸ್ಟೀವನ್ ಕ್ವಾರ್ಡಸ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಸುಮಾರು 700 ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Desk

Recent Posts

‘ರೇವ್ ಪಾರ್ಟಿ’ ಮೇಲೆ ಸಿಸಿಬಿ ದಾಳಿ; ನಟಿ ಹೇಮಾ ಸೇರಿ ಐವರು ಅರೆಸ್ಟ್

ಆರ್ ಫಾರ್ಮ್ ಹೌಸ್ ನಲ್ಲಿ ರೇವ್​ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಪಾರ್ಟಿ ಆಯೋಜಕ ವಾಸು,…

14 mins ago

ಆನೆಯ ಕೂಡುದಂತಕ್ಕೆ ಕತ್ತರಿ ಪ್ರಯೋಗ ಸಕ್ಸಸ್

ಬಂಡೀಪುರದಲ್ಲಿ ಸೆರೆಹಿಡಿಯಲಾಗಿದ್ದ ಆನೆಯ ಕೂಡುದಂತಕ್ಕೆ ಕತ್ತರಿ ಪ್ರಯೋಗ ಮಾಡಿರುವುದು ಸಕ್ಷಸ್ ಆಗಿದೆ. ಕೂಡು ದಂತದಿಂದ ಆಹಾರ ಸೇವಿಸಲಾಗದೆ ಪರದಾಡುತ್ತಿದ್ದ ಆನೆ…

15 mins ago

ಮತಗಟ್ಟೆ ದ್ವಂಸ ಪ್ರಕರಣ : ಬಿಡುಗಡೆಗೊಂಡ ಗ್ರಾಮಸ್ಥರಿಗೆ ಎನ್. ಮಹೇಶ್ ಸಾಂತ್ವಾನ

ಏಪ್ರಿಲ್ 26 ರಂದು ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ…

33 mins ago

ಚುನಾವಣಾ ಕರ್ತವ್ಯದಲ್ಲಿದ್ದ ಬಿಎಸ್‌ಎಫ್ ಯೋಧನಿಂದ ಲೈಂಗಿಕ ಕಿರುಕುಳ

ಪಶ್ಚಿಮ ಬಂಗಾಳದ ಉಲುಬೇರಿಯಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬಿಎಸ್‌ಎಫ್ ಯೋಧನನ್ನು ಲೈಂಗಿಕ ಕಿರುಕುಳ ಆರೋಪ ಬಂದ ಹಿನ್ನೆಲೆಯಲ್ಲಿ…

45 mins ago

ಮೇಯುತ್ತಿದ್ದ ಕುರಿಗಳ ಮೇಲೆ ನಾಯಿಗಳ ದಾಳಿ : ಹತ್ತು ಕುರಿಗಳು ಬಲಿ

ಜಮೀನಿನಲ್ಲಿ ಮೇಯುತ್ತಿದ್ದ ಕುರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ನಾಯಿಗಳ ಹಿಂಡು ಹತ್ತು ಕುರಿಗಳನ್ನ ಕೊಂದುಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ…

46 mins ago

ಹೆಲಿಕಾಪ್ಟರ್ ದುರಂತ : ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು

 ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿರುವ ಮಾಹಿತಿ ಲಭ್ಯವಾಗಿದೆ. ಭಾನುವಾರದಿಂದ ನಡೆಯುತ್ತಿದ್ದ ಗಂಟೆಗಳ ಕಾರ್ಯಾಚರಣೆ…

1 hour ago