ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಬೋವಿಕ್ಕಾನದಲ್ಲಿ ಬುಧವಾರ ನಡೆದ ವೈದ್ಯಕೀಯ ಶಿಬಿರದಲ್ಲಿ 144 ಮಂದಿ ಭಾಗವಹಿಸಿದರು. 276 ಮಂದಿಗೆ ಸ್ಲಿಪ್ ನೀಡಲಾಗಿತ್ತು. ನೂತನವಾಗಿ ಭಾಗವಹಿಸಿದ್ದ 84 ಮಂದಿಯ ಹೆಸರು ನೋಂದಣಿಯೂ ಶಿಬಿರದಲ್ಲಿ ನಡೆಯಿತು.
ಶಸ್ತ್ರಚಿಕಿತ್ಸೆ, ಎಲುಬು ರೋಗ, ನ್ಯೂರೋಲಜಿ, ಇ.ಎನ್.ಟಿ., ಮನೋರೋಗ, ನೇತ್ರರೋಗ, ಶಿಶು ರೋಗ, ಜನರಲ್ ಮೆಡಿಸಿನ್, ಚರ್ಮ ರೋಗ ಸಹಿತ 10 ವಿಭಾಗಗಳಲ್ಲಿ ವೈದ್ಯರು ತಪಾಸಣೆ ನಡೆಸಿದರು. ಶಸ್ತ್ರಚಿಕಿತ್ಸೆ ವಿಭಾಗದಲ್ಲಿ 4 ಮಂದಿ, ಎಲುಬು ರೋಗ ವಿಭಾಗದಲ್ಲಿ 16 ಮಂದಿ, ನ್ಯೂರೋಲಜಿಯಲ್ಲಿ 23 ಮಂದಿ, ಇ.ಎನ್.ಟಿ.ಯಲ್ಲಿ 17 ಮಂದಿ, ಮನೋರೋಗ ವಿಭಾಗದಲ್ಲಿ 37 ಮಂದಿ, ನೇತ್ರರೋಗ ವಿಭಾಗದಲ್ಲಿ 5 ಮಂದಿ, ಶಿಶು ರೋಗ ವಿಭಾಗದಲ್ಲಿ ಒಬ್ಬರು, ಜನರಲ್ ಮೆಡಿಸಿನ್ ನಲ್ಲಿ 29 ಮಂದಿ, ಚರ್ಮ ರೋಗ ವಿಭಾಗದಲ್ಲಿ 5 ಮಂದಿ ತಪಾಸಣೆಗೊಳಗಾಗಿದ್ದಾರೆ.
ಮುಳಿಯಾರು, ಚೆಂಗಳ, ಬೇಡಡ್ಕ, ದೇಲಂಪಾಡಿ, ಕಾರಡ್ಕ, ಮೊಗ್ರಾಲ್ ಪುತ್ತೂರು, ಕುತ್ತಿಕೋಲು, ಮಧೂರು ಗ್ರಾಮ ಪಂಚಾಯತ್ ಗಳ ಮತ್ತು ಕಾಸರಗೋಡು ನಗರಸಭೆಯ ಆರೋಗ್ಯ ಸಂಸ್ಥೆಗಳ ಮೂಲಕ ಶಿಬಿರದಲ್ಲಿ ಭಾಗವಹಿಸಬೇಕಾದವರಿಗೆ ಸ್ಲಿಪ್ ವಿತರಿಸಲಾಗಿತ್ತು. ಇದು ಶಿಬಿರದಲ್ಲಿ ಭಾಗವಹಿದವರಿಗೆ ತುಂಬ ಸಹಕಾರಿಯಾಗಿತ್ತು.
ಎಂಡೋಸಲ್ಫಾನ್ ವಿಶೇಷ ಘಟಕದ ಹೊಣೆಗಾರಿಕೆಯಿರುವ ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ ಅವರ ನೇತೃತ್ವದಲ್ಲಿ ಶಿಬಿರ ನಡೆದಿತ್ತು. ಆಯಾ ವಿಭಾಗದಲ್ಲಿ ಒಬ್ಬ ವೈದ್ಯರು, ಇಬ್ಬರು ದಾದಿಯರು ಇದ್ದರು. ಮೊಗ್ರಾಲ್ ಪುತ್ತೂರು ಎಫ್.ಎಚ್.ಸಿ., ಕಾಸರಗೋಡು ಅರ್ಬನ್ ಪಿ.ಎಚ್.ಸಿ., ಚೆಂಗಳ ಪಿ.ಎಚ್.ಸಿ., ಮುಳಿಯಾರು ಪಿ.ಎಚ್.ಸಿ., ಮುಳ್ಳೇರಿಯ ಪಿ.ಎಚ್.ಸಿ., ಅಡೂರು ಪಿ.ಎಚ್.ಸಿ.ಗಳ ಹೆಲ್ತ್ ಇನ್ಸ್ ಪೆಕ್ಟರ್ ಗಳು, ಜ್ಯೂನಿಯರ್ ಪಬ್ಲಿಕ್ ಹೆಲ್ತ್ ನರ್ಸ್ ಗಳು, ಇನ್ಸ್ ಪೆಕ್ಟರ್ ಗಳು, ಶಾಲಾ ಆರೋಗ್ಯ ದಾದಿಯರು, ವಿವಿಧ ಸಿ.ಎಚ್.ಸಿ.ಗಳ ಪಿ.ಆರ್.ಒ.ಗಳು, ಆಶಾ ವರ್ಕರ್ ಗಳು, ಎನ್.ಎಸ್.ಎಸ್. ಸ್ವಯಂಸೇವಕರು ಶಿಬಿರದಲ್ಲಿ ಸೇವೆ ಸಲ್ಲಿಸಿದರು. ಪೊಲೀಸ್ ಇಲಾಖೆಯ ಸೇವೆಯೂ ನಡೆದಿತ್ತು.
ಅಂಜಲಿ ಅಂಬಿಗೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ ಅಮಾನತು…
ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್ ಕೊಲೆ ಆರೋಪಿಗೆ ಎನ್ಕೌಂಟರ್ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.
ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…
ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…
ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…
ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…