News Karnataka Kannada
Monday, April 29 2024
ಕರಾವಳಿ

ಲಾರಿ-ಕಾರು ಡಿಕ್ಕಿ:ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು

Photo Credit :

ಲಾರಿ-ಕಾರು ಡಿಕ್ಕಿ:ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಮಾವಳ್ಳಿ ಕ್ರಾಸ್ ಬಳಿ ಎದುರು ಬರುತ್ತಿದ್ದ ಲಾರಿಗೆ ಸುಜುಕಿ ಅಲ್ಟೊ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ವಿನಾಯಕ ಹೆಗಡೆ (೩೫), ಅರ್ಚನಾ ಹೆಗಡೆ (೩೩) ಹಾಗೂ ಒಂದೂವರೆ ವರ್ಷದ ಬಾಲಕಿ ಶ್ರಾವಣಿ ಹೆಗಡೆ ಮೃತಪಟ್ಟವರು. ಕಾರಿನಲ್ಲಿದ್ದ ನಾಲ್ಕೂವರೆ ವರ್ಷದ ಬಾಲಕಿ ಯಶಸ್ವಿನಿ ಹೆಗಡೆ ಅಪಾಯದಿಂದ ಪಾರಾಗಿದ್ದಾಳೆ.
ಮೂಲತಃ ಶಿರಸಿಯ ಸೋಂದಾದ ಅರಗಿನಮನೆಯವರಾಗಿರುವ ವಿನಾಯಕ ಹೆಗಡೆಯವರು ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದು, ಸದ್ಯ ಬೆಳಗಾವಿಗೆ ವರ್ಗಾವಣೆ ಹೊಂದಿದ್ದಾರೆ. ತಮ್ಮ ಊರಿಗೆ ಬಂದಿದ್ದ ಅವರು ಮಗಳನ್ನು ಶಾಲೆಗೆ ದಾಖಲಾತಿ ಮಾಡಲೆಂದು ಬೆಳಗಾವಿಗೆ ಪುನಃ ತೆರಳುತ್ತಿದ್ದ ವೇಳೆ ಈ ಅವಘಡ ನಡೆದಿದೆ.

ಲಾರಿಯು ಹುಬ್ಬಳ್ಳಿಯಿಂದ ಕುಮಟಾ ಕಡೆ ಬರುತ್ತಿತ್ತು ಎನ್ನಲಾಗಿದೆ. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು