ಪುತ್ತೂರು : ಚಿಕ್ಕಮುಡ್ನೂರು ಗ್ರಾಮದ ಯುವಕ ಮತ್ತು ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆ ಮತ್ತು ಮಹಿಳಾ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರು ನೀಡಲಾಗಿದೆ.
ಚಿಕ್ಕಮುಡ್ನೂರು ಗ್ರಾಮದ ಗಡಿಕಲ್ಲು ನಿವಾಸಿ ಶಿವಪ್ಪ ಅವರ ಪುತ್ರಿ ಅಶ್ವಿನಿ (19ವ) ಮತ್ತು ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆ ನಿವಾಸಿ ಮಹಾಬಲ ಮತ್ತು ಜಯಂತಿ ದಂಪತಿ ಪುತ್ರ ಪ್ರವೀಣ್(23ವ)ರವರು ನಾಪತ್ತೆಯಾದವರು. ಪಡೀಲ್ ಅಡಿಕೆ ಗಾರ್ಬಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಅಶ್ವಿನಿ ಅವರು ಎಂದಿನಂತೆ ಕಳೆದ ನ.26ರಂದು ಬೆಳಿಗ್ಗೆ ಅಡಿಕೆ ಗಾರ್ಬಲ್ಗೆ ಕೆಲಸಕ್ಕೆಂದು ಹೋದವರು ನಾಪತ್ತೆಯಾಗಿರುವುದಾಗಿ ಆಕೆಯ ತಂದೆ ಶಿವಪ್ಪ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆ ನಿವಾಸಿ ಮಹಾಬಲ ಮತ್ತು ಜಯಂತಿ ದಂಪತಿಯ ಪುತ್ರ ಪ್ರವೀಣ್ (23ವ) ನಾಪತ್ತೆಯಾದ ಯುವಕ. ಚಿಕ್ಕಮುಡ್ನೂರು ಪರಿಸರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಪ್ರವೀಣ್ ಕಳೆದ ನ.27ರಿಂದ ನಾಪತ್ತೆಯಾಗಿರುವ ಕುರಿತು ಆತನ ತಾಯಿ ಜಯಂತಿ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆಯಾಗಿರುವ ಅಶ್ವಿನಿ ಮತ್ತು ಪ್ರವೀಣ್ ಅವರು ಪರಸ್ಪರ ಪ್ರೀತಿಸುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ.