ಮೊಡಂಕಾಪು ವಿನಲ್ಲಿ ನೂತನ ರೋಟರಿ ಕ್ಲಬ್ ಆಸ್ತಿತ್ವಕ್ಕೆ
ಮಂಗಳೂರು ; ರೋಟರಿ ಕ್ಲಬ್ ಬಂಟ್ವಾಳ ಇದರ ನೇತೃತ್ವದಲ್ಲಿ ಮೊಡಂಕಾಪುವಿನಲ್ಲಿ ನೂತನ ರೋಟರಿ ಕ್ಲಬ್ಬಿನ ಸ್ಥಾಪನೆಯು ನಡೆಯಿತು. ಈ ಕ್ಲಬ್ಬಿನ ಚಾರ್ಟರ್ ಹಸ್ತಾಂತರಕಾರ್ಯಕ್ರಮವು ಜೂನ್ 28ನೇ ತಾರೀಖಿನಂದು ಜೂಮ್ ಮೀಟಿಂಗ್ ಮುಖಾಂತರಬಂಟ್ವಾಳ ರೋಟರಿ ಕ್ಲಬ್ಬಿನ ಅಧ್ಯಕ್ಷ ಕೆ. ನಾರಾಯಣ ಹೆಗ್ಡೆಯವರ ಅಧ್ಯಕ್ಷತೆಯಲ್ಲಿಜರುಗಿತು.ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಎಮ್. ರಂಗನಾಥ ಭಟ್ ನೂತನ ಅಧ್ಯಕ್ಷಎಲಿಯಾಸ್ ಸ್ಯಾಂಕ್ತಿಸ್ರವರಿಗೆ ನೂತನ ಕ್ಲಬ್ಬಿನ ಚಾರ್ಟರ್ ಹಸ್ತಾಂತರ ಮಾಡಿದರು.ನೂತನ ಕ್ಲಬ್ಬಿನ ಅಧ್ಯಕ್ಷರಾಗಿ ಇಲಿಯಾಸ್ ಸ್ಯಾಂಕ್ತಿಸ್, ಕಾರ್ಯದರ್ಶಿಯಾಗಿ ಪಿ.ಎರಹೀಮ್, ಖಜಾಂಚಿಯಾಗಿ ಪ್ರೀ ಮಾ ವಾಯ್ಲೆಟ್ ಫೆರ್ನಾಂಡಿಸ್, ಉಪಾಧ್ಯಕ್ಷರಾಗಿವಿ.ಕೆ ಪ್ರಸನ್ನ ಕುಮಾರ್, ನಿರ್ದೇಶಕರಾಗಿ ಕ್ಲಬ್ ಸೇವೆ – ದಿವಾಕರ್ ಶೆಟ್ಟಿ ಪರಾರಿಗುತ್ತು, ಸುಮುದಾಯ ಸೇವೆ – ರೋಶನ್ ರೈ, ವೃತ್ತಿ ಸೇವೆ – ಸುನೀಲ್ಕುಂದರ್, ಅಂತರಾಷ್ಟ್ರೀಯ ಸೇವೆ – ರೋಶನ್ ಪ್ರೇ ಮ್ ಡಿಸೋಜ, ಯುವ ಜನಸೇವೆ – ಪ್ರಖ್ಯಾತ್ ಚೌಟ, ಮುಂದಿನ ಸಾಲಿನ ನಿಯೋಜಿತ ಅಧ್ಯಕ್ಷರಾಗಿ ಡಾ|ಗೋವರ್ಧನ್ ರಾವ್ ಮತ್ತು ಚೇರ್ಮೆನ್ಗಳಾಗಿ ಪಾವ್ಲ್ ಕಾರ್ಲೊ, ವಿಶ್ವಪ್ರಸಾದಹೆಗ್ಡೆ, ಅರುಣ್ ಕುಮಾರ್, ಮಲ್ಲಿಕಾ ವಿ. ಶೆಟ್ಟಿ, ಸ್ಟ್ಯಾನಿ ಡಿಸೋಜ, ಹೇಮಚಂದ್ರ
ವಕೀಲ್ ಹಾಗೂ ಸಾರ್ಜಂಟ್ ವಿದ್ ಆಮ್ರ್ಸ್ ಆಗಿ ಡೊನಾಲ್ಡ್ ಡಿಸೋಜರವರು ಅಧಿಕಾರ ಸ್ವೀಕರಿಸಿದರು.ಮುಖ್ಯ ಅತಿಥಿಗಳಾಗಿ ರೊ| ಎನ್ ಪ್ರಕಾಶ್ ಕಾರಂತ ನಿಯೋಜಿತ ಜಿಲ್ಲಾ ಗವರ್ನರ್,ರೊ| ಪ್ರತಾಪಸಿಂಹ ನಾಯಕ್, ಅಸಿಸ್ಟಂಟ್ ಗವರ್ನರ್ ವಲಯ 4, ಯತಿಕುಮಾರಸ್ವಾಮಿ ಗೌಡ ಅಸಿಸ್ಟಂಟ್ ಗವರ್ನರ್ ವಲಯ 4, ಸೇನಾನಿ ಜಯರಾಜ ಬಂಗೇರ,ಗವರ್ನರ್ ವಿಶೇಷ ಪ್ರತಿನಿಧಿ ಬಿ. ಸಂಜೀವ ಪೂಜಾರಿ ಮಾತೃ ಸಂಸ್ಥೆಯಕಾರ್ಯದರ್ಶಿ ವಾಣಿ ಕಾರಂತ ಮತ್ತು ಬಿ.ಸಿ ರೋಡ್ ಚರ್ಚಿನ ಧರ್ಮಗುರುಗಳಾದರೆ| ಫಾ| ವಲೇರಿಯನ್ ಡಿಸೋಜರವರಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಗವರ್ನರ್ ಎಮ್. ರಂಗನಾಥ ಭಟ್ರೋಟರಿ ಕ್ಲಬ್ಬಿನಿಂದ ಪರಿಸರದ ಜನರಿಗೆ ಉತ್ತಮ ಸೇವೆ ಸಿಗಲಿ, ರೋಟರಿಯಧ್ಯೇಯಗಳನ್ನು ಮನದಲ್ಲಿಟ್ಟುಕೊಂಡು ಕಾರ್ಯ ಪ್ರವೃತ್ತರಾಗಿ ಎಂದು ನೂತನ ಅಧ್ಯಕ್ಷಹಾಗೂ ಅವರ ತಂಡಕ್ಕೆ ಶುಭ ಹಾರೈಸಿದರು.ನಿಯೋಜಿತ ರೊ| ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತರವರು ಮಾತನಾಡಿ ರೋಟರಿಪ್ರಸ್ತುತ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಡುತ್ತದೆ ಮತ್ತು ರೋಟರಿ ಸದಸ್ಯರಸಂಖ್ಯೆಯನ್ನು ವೃದ್ಧಿಸಿ ತನ್ಮೂಲಕ ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆಯಾಗಲಿಎಂದು ನೂತನ ತಂಡಕ್ಕೆ ಶುಭ ಹಾರೈಸಿದರು.ಗವರ್ನರ್ ವಿಶೇಷ ಪ್ರತಿನಿಧಿ ಬಿ. ಸಂಜೀವ ಪೂಜಾರಿಯವರು ನೂತನ ಸದಸ್ಯರಪರಿಚಯ ನೀಡಿದರು. ಹಾಗೂ ನೂತನ ಕ್ಲಬ್ಬಿನ ಕಾರ್ಯದರ್ಶಿ ಪಿ.ಎ ರಹೀಮ್ವಂದಿಸಿದರು. ಡೊನಾಲ್ಡ್ ಡಿಸೋಜರವರು ಕಾರ್ಯಕ್ರಮ ನಿರ್ವಹಿಸಿದರು.