ಮೂಡುಬಿದಿರೆ: ಮೂಡುಬಿದಿರೆ, ವೇಣೂರು, ಕಾಪು, ಶಿರ್ವ, ಉಡುಪಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು ಹತ್ತು ಬೈಕ್ ಕಳ್ಳತನ ಹಾಗೂ ಗ್ರಾಹಕರ ಸೋಗಿನಲ್ಲಿ ಅಂಗಡಿಯಿಂದ ಬಂಗಾರ ಕಳ್ಳತನದ ಆರೋಪಿ, ಕಾರ್ಕಳ ತಾಲೂಕು ಇನ್ನಾದ ನಿವಾಸಿ ಪ್ರದೀಪ್ ಮೊಯ್ಲಿ(30) ಎಂಬಾತನನ್ನು ಮೂಡುಬಿದಿರೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಶುಕ್ರವಾರ ಮುಂಜಾನೆ ಮೂಡುಬಿದಿರೆ ಅಪರಾಧ ವಿಭಾಗದ ಎಸ್.ಐ ಶಂಕರ್ ನಾಯರಿ, ಸಿಬಂದಿಗಳಾದ ರಾಜೇಶ್ ಮತ್ತು ಮಾಧವ ಸ್ವರಾಜ್ಯ ಮೈದಾನ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ತನ್ನ ಬಗ್ಗೆ ಪೊಲೀಸರಿಗೆ ಅಸಮರ್ಪಕ ಉತ್ತರ ನೀಡಿದನೆನ್ನಲಾಗಿದೆ. ಅನುಮಾನಗೊಂಡ ಪೊಲೀಸರು ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆ ನಡೆಸಿದಾಗ ಈತ ಮಂಗಳೂರು ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ದ್ವಿಚಕ್ರ ವಾಹನದಲ್ಲಿ ಪಡುಬಿದ್ರೆಯಿಂದ ಮೂಡುಬಿದಿರೆಗೆ ಕಳ್ಳತನಕ್ಕೆ ಬರುವವನೆಂಬುದು ಗೊತ್ತಾಯಿತ್ತೆನ್ನಲಾಗಿದೆ.
ಆರೋಪಿಯಿಂದ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಕೋರ್ಟ್ ಗೆ ಹಾಜರುಪಡಿಸಿದಾಗ 15 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿ ಪ್ರದೀಪ್ ದಲ್ಲಿ ಬಂಧನಕ್ಕೊಳಗಾಗಿ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಬಂದಿದ್ದ ಎನ್ನಲಾಗಿದೆ.