ಕಾರ್ಕಳ: ನಗರದ ಪ್ರಮುಖ ರಸ್ತೆಯಾಗಿರುವ ಬಂಗ್ಲೆಗುಡ್ಡೆ ಜಂಕ್ಷನ್ ನಲ್ಲಿ ಬೀದಿ ದೀಪ ಪ್ರಜ್ವಲಿಸದೇ ರಾತ್ರಿ ವೇಳೆ ಕರಿ ಕತ್ತಲು ಅವರಿಸಿದೆ.
ಕಳೆದ ಕೆಲ ತಿಂಗಳುಗಳ ಹಿಂದೆಯಷ್ಟೇ ನಿರ್ಮಿಸಿದ ಬಂಗ್ಲೆಗುಡ್ಡೆ- ತಾಲೂಕು ಜಂಕ್ಷನ್ ವರೆಗಿನ ರಸ್ತೆ ವಿಭಜಕಕ್ಕೆ ಬೀದಿ ದೀಪಗಳನ್ನು ಅಳವಡಿಸುವ ಮೂಲಕ ತಾತ್ಕಾಲಿಕವಾಗಿ ಕಾರ್ಕಳ ಪ್ರಕಾಶಿಸುತ್ತಿದೆ ಎಂದು ಪುರಸಭಾ ಆಡಳಿತ ವರ್ಗ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಜಾಯಮಾನಕ್ಕೆ ಮುಂದಾಗಿತ್ತು.
ಈ ಎಲ್ಲಾ ಬಣ್ಣ ಬಯಲುಗೊಳಿಸಿರುವುದು ಅದೇ ಬೀದಿದೀಪ ಎಂದರೂ ತಪ್ಪಾಗಲಾರದು. ವಿಪರ್ಯಾಸವೆಂದರೆ ಅಳವಡಿಸಿದ ಬೀದಿದೀಪಗಳಿಗೆ ನಿರ್ವಹಣೆ ಇಲ್ಲದೇ ಇರುವುದು ಹಾಗೂ ಅದರ ಅದರತ್ತ ಗಮನ ಹರಿಸುವಲ್ಲಿ ಪುರಸಭಾ ಆಡಳಿತ ವರ್ಗ ಸಂಪೂರ್ಣ ವಿಫಲಗೊಂಡಿದೆ.
ಪುರಸಭಾ ಸಾಮಾನ್ಯಸಭೆಯಲ್ಲಿ ಕ್ಷುಲಕ ವಿಚಾರದಲ್ಲಿ ಕಾಲಹರಣ ಮಾಡುವಂತಹ ಕೆಲ ಜನಪ್ರತಿನಿಧಿಗಳು ಇನ್ನಾದರೂ ಜನಪರ ಕಾರ್ಯಗಳನ್ನಾದರೂ ಕ್ರಮ ಕೈಗೊಳ್ಳಬೇಕಾಗಿ ನಾಗರಿಕರು ಒತ್ತಾಯಿಸಿದ್ದಾರೆ.