ಪುತ್ತೂರು: ಯುವಕನೊಬ್ಬನನ್ನು ಬೆದರಿಸಿ ಬಲವಂತದಿಂದ ₹ 30 ಲಕ್ಷ ವಸೂಲಿ ಮಾಡಿದ್ದ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸರು ಪುತ್ತೂರು ತಾಲ್ಲೂಕಿನ ಕೆದಂಬಾಡಿ ಗ್ರಾಮದ ನಿಡ್ಯಾಣ ನಿವಾಸಿ ಅಬ್ದುಲ್ ನಾಸೀರ್ (27) ಎಂಬಾತನನ್ನು ಬಂಧಿಸಿದ್ದಾರೆ.
ಈ ಮೂಲಕ ಈವರೆಗೆ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.
ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡ ಯುವತಿಯ ಜತೆ ಆಕೆಯ ಒತ್ತಾಯಕ್ಕೆ ಮಣಿದು ಅಶ್ಲೀಲ ವರ್ತನೆಯ ವಿಡಿಯೊ ಕರೆ ಮಾಡಿ ಹನಿಟ್ರ್ಯಾಪ್ ಜಾಲದ ಬಲೆಗೆ ಬಿದ್ದು ₹ 30ಲಕ್ಷ ಹಣ ಕಳೆದುಕೊಂಡ ನೆಟ್ಟಣಿಗೆ ಮುಡ್ನೂರು ಗ್ರಾಮದ ಯುವಕನೀಡಿದ ದೂರಿನಂತೆ ತಿಂಗಳ ಹಿಂದೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.