ಮಂಗಳೂರು: ನವಮಂಗಳೂರು ಬಂದರು ಟ್ರಸ್ಟ್ ಆಯೋಜನೆ ಹಾಗೂ ಫೆಡರೇಶನ್ ಆಫ್ ಇಂಡಿಯನ್ ಎಕ್ಸ್ ಪೋರ್ಟ್ ಆರ್ಗನೈಶನ್ ಆ್ಯಂಡ್ ಇಂಡಿಯಾ ಸೀಟ್ರೇಡ್ ಸಹ ಭಾಗಿತ್ವದಲ್ಲಿ ನವಂಬರ್ 22ರಂದು ಮಂಗಳೂರಿನ ಹೋಟೆಲ್ ಓಶಿಯನ್ ಪರ್ಲ್ ನಲ್ಲಿ ಕರ್ನಾಟಕ ಪೋರ್ಟ್ಸ್, ಶಿಪ್ಪಿಂಗ್ ಆ್ಯಂಡ್ ಲಾಜಿಸ್ಟಿಕ್ಸ್ ಸಮ್ಮೇಳನ ನಡೆಯಲಿದೆ.
ಸಮ್ಮೇಳನದಲ್ಲಿ ಹಡಗು, ಬಂದರು, ಕಾರ್ಗೋ ಮತ್ತು ಲಾಜಿಸ್ಟಿಕ್ ಕುರಿತು ವಿಚಾರ ವಿನಿಮಯ ನಡೆಯಲಿದೆ.
ಈ ಸಮ್ಮೇಳನದಲ್ಲಿ ವಾಣಿಜ್ಯ ಮಂತ್ರಾಲಯದ ಲಾಜಿಸ್ಟಿಕ್ ವಿಶೇಷ ಕಾರ್ಯದರ್ಶಿ ಎನ್ ಸಿವಸೈಲಂ, ನವಮಂಗಳೂರು ಬಂದರು ಟ್ರಸ್ಟ್ ನ ಅಧ್ಯಕ್ಷರಾದ ಎ.ವಿ.ರಮಣ, ಜಂಟಿ ಡಿಜಿಎಫ್ ಟಿ ಜೆ.ವಿ. ಪಾಟೀಲ್, ಪ್ಲಾಸ್ಟಿಕ್ ಎಕ್ಸ್ ಪೋರ್ಟ್ ಪ್ರಮೋಷನ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ರವೀಶ್ ಕಾಮತ್, ಮುಕ್ಕ ಸೀಫುಡ್ ಇಂಡಸ್ಟ್ರೀಸ್ ನ ಮೊಹಮ್ಮದ್ ಆರೀಫ್, ಗೋವನ್ ಫ್ರೆಶ್ ಮರೈನ್ ಎಕ್ಸ್ ಪೋರ್ಟ್ಸ್ ಪ್ರೈ ಲಿಮಿಟೆಡ್ ನಿರ್ದೇಶಕ ಬಿಜು ನಾಯರ್, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ(ಲೈನರ್ ಆ್ಯಂಡ್ ಪ್ಯಾಸೇಂಜರ್) ನಿರ್ದೇಶಕ ಸಂಗೀತಾ ಶರ್ಮಾ, ಕಂಟೈನರ್ ಕಾರ್ಪೋರೇಷನ್ ಆಫ್ ಇಂಡಿಯಾದ ಜಿಜಿಎಂ ಡಾ. ಅನೂಪ್ ದಯಾನಂದ ಸಂಧು, ಇಂಡಿಯನ್ ನ್ಯಾಶನಲ್ ಶಿಪ್ ವೋನರ್ಸ್ ಅಸೋಸಿಯೇಶನ್ ಸಿಇಒ ಹಾಗೂ ಜೆಎಸ್ ಡಬ್ಲ್ಯೂ ಇನ್ ಫ್ರಾಸ್ಟ್ರಕ್ಚರ್, ಮರ್ಸಕ್ ಲೈನ್, ಮೆಡಿಟೇರಿಯನ್ ಶಿಪ್ಪಿಂಗ್ ಕಂಪೆನಿ ಮತ್ತು ಸಿಎಂಎ ಸಿಜಿಎಂ ನ ಹಿರಿಯ ಪ್ರತಿನಿಧಿ ಅನಿಲ್ ದೆವ್ಲಿ ಅವರು ಭಾಗವಹಿಸುವರು.
ಮಂಗಳೂರು ಮತ್ತು ಕರ್ನಾಟಕ ರಾಜ್ಯದಲ್ಲಿ ಕಾರ್ಗೋ ಮೂಮೆಂಟ್ ಮತ್ತು ಮಲ್ಟಿಮಾಡೆಲ್ ಲಾಜಿಸ್ಟಿಕ್ ನ ಟ್ರೆಂಡ್ ಈ ಸಮ್ಮೇಳನದ ಚರ್ಚೆಯ ವಿಚಾರವಾಗಿದೆ.
ಮಂಗಳೂರು ಮತ್ತು ಕರ್ನಾಟಕವು ಮೇರಿಟೈಮ್, ಕಾರ್ಗೊ ಮತ್ತು ಲಾಜಿಸ್ಟಿಕ್ ನ ಹಬ್ ಎಂದು ಗೋವಾ, ಮುಂಬಯಿ, ಗುಜರಾತ್, ಕೇರಳ, ಚೆನ್ನೈ, ಟುಟಿಕೊರಿನ್ ಮತ್ತು ದೆಹಲಿ ಕೂಡ ಇದನ್ನು ದೃಢಪಡಿಸಿದೆ. ಹೀಗಾಗಿ ಇದು ಕೇವಲ ಕರ್ನಾಟಕಕ್ಕೆ ಸೀಮಿತವಾದ ಸಮ್ಮೇಳನವಲ್ಲ.
ಈ ಕ್ಷೇತ್ರದಲ್ಲಿ ವಿವಿಧ ಸೇವೆ ಒದಗಿಸುತ್ತಿರುವ ಪ್ರಮುಖ ಕಂಪೆನಿಗಳು ಹಾಗೂ ಉದ್ಯಮಿಗಳು ಭಾಗಿಯಾಗುವರು. ಲಾಜಿಸ್ಟಿಕ್ ಸೇವೆ ಪೂರೈಕೆದಾರರು, ಕಾರ್ಯನೀತಿ ರೂಪಿಸುವವರು ಮತ್ತು ನಿಯಂತ್ರಕ ಅಧಿಕಾರಿಗಳು, ಈ ಇಲಾಖೆಗೆ ಸಂಬಂಧಪಟ್ಟವರು ಇದರಲ್ಲಿ ಭಾಗಿಯಾಗುವರು.
ಈ ಸಮ್ಮೇಳನದಲ್ಲಿ ಶಿಪ್ಪಿಂಗ್ ಹಾಗು ಲಾಜಿಸ್ಟಿಕ್ಸ್ ಇಲಾಖೆಯಲ್ಲಿನ ಸವಾಲುಗಳು ಹಾಗೂ ಅವಕಾಶಗಳು, ಸಂಪರ್ಕಕ್ಕೆ ರೂಪುರೇಷೆ ಮತ್ತು ಮಂಗಳೂರಿನಲ್ಲಿ ಕಾರ್ಗೋ ಸಾಗಾಣೆ ಮತ್ತು ಇದಕ್ಕೆ ಪರಿಹಾರಗಳ ಸಹಿತ ಹಲವಾರು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುವುದು.
ಒಂದೇ ಸೂರಿನಡಿಯಲ್ಲಿ ಸಂಪೂರ್ಣ ಸಮೂಹವು ಭಾಗಿಯಾಗುವ ಕಾರಣದಿಂದ ಇದು ಒಂದು ಅತ್ಯುತ್ತಮ ಅವಕಾಶವನ್ನು ನೀಡಲಿದೆ. ಭಾಗವಹಿಸಲು ಬಯಸುವವರು www.indiaseatrade.com/karnataka/ ಲಾಗಿನ್ ಆಗಬಹುದು ಎಂದು ಆಯೋಜಕರು ತಿಳಿಸಿದ್ದಾರೆ.