ಬಂಟ್ವಾಳ: ಆಶ್ರಯ ಯೋಜನೆಯಡಿ ಎಲ್ಲರಿಗೂ ಮುಂದಿನ ಮಾರ್ಚ್ ನೊಳಗೆ ಮನೆ ವಿತರಿಸಲು ಸರಕಾರ ಉದ್ದೇಶಿಸಿದ್ದು, ಅರ್ಹ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದ್ದಾರೆ.
ಬಿ.ಸಿ.ರೋಡಿನಲ್ಲಿರುವ ಶಾಸಕರ ಕಚೇರಿಯಲ್ಲಿ ಗುರುವಾರ ಬಂಟ್ವಾಳ, ಪಾಣೆಮಂಗಳೂರು ಹಾಗೂ ವಿಟ್ಲ ಹೋಬಳಿಗೆ ಸೇರಿ ಒಟ್ಟು 55 ಮಂದಿಗೆ ಪಾಕೃತಿಕ ವಿಕೋಪದಡಿ ಪರಿಹಾರದ ಚೆಕ್ ಹಾಗೂ 36 ಮಂದಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ವಿವಿಧ ಕಾರಣಗಳಿಂದ ಅರ್ಜಿಸಲ್ಲಿಸಲು ಬಾಕಿ ಇರುವವರು,ಹೊಸದಾಗಿ ಮನೆ ಕೋರಿ ಅರ್ಜಿ ಸಲ್ಲಿಸುವವರು ಮುಂದಿನ ಮಾರ್ಚ್ 31 ರವರೆಗೆ ಅವಕಾಶವಿದೆ ಎಂದು ಹೇಳಿದರು. ಡೀಮ್ಡ್ ಫಾರೆಸ್ಟ್ ನಲ್ಲಿ ಹಲವಾರು ಸಮಯದಿಂದ ಮನೆ ಕಟ್ಟಿ ವಾಸ್ತವ್ಯವಿದ್ದವರಿಗೆ ಹಕ್ಕುಪತ್ರ ನೀಡಲು ಇದ್ದ ಸಮಸ್ಯೆಯನ್ನು ಅರಣ್ಯ ಸಚಿವರೊಂದಿಗೆ ಚರ್ಚಿಸಿ ನಿವಾರಿಸಲಾಗಿದ್ದು,ಬಂಟ್ವಾಳ ಕ್ಷೇತ್ರದ ವಿಟ್ಲಪಡ್ನೂರು ಮತ್ತು ಉಳಿ ಗ್ರಾಮದಲ್ಲಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ವಾಸವಿರುವ ಹಲವಾರು ಫಲಾನುಭವಿಗಳಿಗೆ ಶೀಘ್ರದಲ್ಲೇ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪಾಣೆಮಂಗಳೂರು,ಬಂಟ್ವಾಳ,ವಿಟ್ಲ ಹೋಬಳಿಗೆ ಸಂಬಂಧಿಸಿ 36 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದ್ದರೆ ಪಾಕೃತಿಕ ವಿಕೋಪದಡಿ 55 ಮಂದಿಗೆ 3.12ಲಕ್ಷ ರೂ. ಪರಿಹಾರ ಚೆಕ್ ನ್ನು ವಿತರಿಸಲಾಗಿದೆ.ಬಂಟ್ವಾಳ ಕ್ಷೇತ್ರದಲ್ಲಿ ಈಗಾಗಲೇ ಹಕ್ಕು ಪತ್ರ ವಂಚಿತರಿಗೆ ಹಕ್ಕು ಪತ್ರವಿತರಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಾಕಿಯಿರುವ ಎಲ್ಲಾ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪಾಣೆಮಂಗಳೂರು,ಬಂಟ್ವಾಳ,ವಿಟ್ಲ ಹೋಬಳಿಗೆ ಸಂಬಂಧಿಸಿ 36 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದ್ದರೆ ಪಾಕೃತಿಕ ವಿಕೋಪದಡಿ 55 ಮಂದಿಗೆ 3.12ಲಕ್ಷ ರೂ. ಪರಿಹಾರ ಚೆಕ್ ನ್ನು ವಿತರಿಸಲಾಗಿದೆ.ಬಂಟ್ವಾಳ ಕ್ಷೇತ್ರದಲ್ಲಿ ಈಗಾಗಲೇ ಹಕ್ಕು ಪತ್ರ ವಂಚಿತರಿಗೆ ಹಕ್ಕು ಪತ್ರವಿತರಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಾಕಿಯಿರುವ ಎಲ್ಲಾ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಬಿಜೆಪಿ ಪ್ರಮುಖರಾದ ಸುನಿಲ್ ಕಾಯರ್ ಮಾರ್, ಜನಾರ್ದನ ಬೊಂಡಾಲ, ಸೀತಾರಾಮ ಅಗೊಳಿಬೆಟ್ಟು, ರಾಮಕೃಷ್ಣ ಮಯ್ಯ, ಮನೋಜ್ ಕಳ್ಳಿಗೆ, ದಿನೇಶ್ ಪೂಜಾರಿ, ವಿಜಯ ಅಮ್ಟಾಡಿ, ಕಂದಾಯ ನಿರೀಕ್ಷಕ ರಾದ ರಾಮಕಾಟಿಪಳ್ಳ, ನವೀನ್ ಬೆಂಜನಪದವು, ದಿವಾಕರ ಮುಗುಳಿ, ಗ್ರಾಮ ಕರಣೀಕರಾದ ಕರಿಬಸಪ್ಪ ನಾಯಕ್, ಮಂಜುನಾಥ್ ಕೆ.ಎಚ್, ಕುಮಾರ್ ಟಿ.ಸಿ. ವೈಶಾಲಿ, ಪ್ರದೀಪ್ ಕುಲಾಲ್,ಸದಾಶಿವ ಕೈಕಂಬ ಮೊದಲಾದವರಿದ್ದರು.