ಮಂಗಳೂರು: ಚುನಾವಣಾ ಅಕ್ರಮದಲ್ಲಿ ಭಾಗಿಯಾದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ರಮಾನಾಥ ರೈ ಅವರುಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಯಾವುದೇ ತೊಡಕಾಗುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಖಾರಿ ಸಸಿಕಾಂತ್ ಸೆಂಥಿಲ್ ಅವರು ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮಾನಾಥ ರೈ ವಿರುದ್ಧದ ಆರೋಪ ತನಿಖೆಯ ಹಂತದಲ್ಲಿದೆ. ಚುನಾವಣೆ ಮೊದಲು ವಿಚಾರಣೆ ಮುಗಿದು ಅಪರಾಧ ಸಾಬೀತಾದರೆ ಮಾತ್ರವೇ ಚುನಾವಣೆ ಸ್ಪರ್ಧೆಗೆ ಅಡ್ಡಿಯಾಗಬಹುದು.
ರೈ ಚುನಾವಣೆ ಸ್ಪರ್ಧಿಸಿದರೆ ನಾಮಪತ್ರದ ಜತೆಗೆ ಪ್ರಮಾಣಪತ್ರದಲ್ಲಿ ಈ ಪ್ರಕರಣದ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಹೇಳಿದರು.