ಬೆಳ್ತಂಗಡಿ: ಧರ್ಮಸ್ಥಳದಲ್ಲಿ ರಜತಾದ್ರಿ ವಸತಿ ಗೃಹದಲ್ಲಿ ಆಶ್ರಮದ 240 ಕೊರೊನಾ ಸೋಂಕಿತರಿಗೆ ಸುಮಾರು ಒಂದುವರೆ ತಿಂಗಳು ಕಾಲ ಊಟ ವಸತಿಯೊಂದಿಗೆ ಶುಶ್ರೂಷೆ ಪಡೆಯಲು ಉಚಿತವಾಗಿ ವಿಶೇಷ ಸೌಲಭ್ಯ ಕಲ್ಪಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಬಳಗದವರು ಗೌರವಾರ್ಪಣೆ ಮಾಡಿದರು.
ಸಿಯೋನ್ ಆಶ್ರಮಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಿರುವುದಲ್ಲದೆ ದಿನಬಳಕೆಯ ಪರಿಕರಗಳನ್ನು ನೀಡಿ ನಿರಂತರ ಸಹಕಾರ ನೀಡುತ್ತಿರುವ ಬಗ್ಗೆ ಡಾ. ಹೆಗ್ಗಡೆಯವರಿಗೆ ಕೃತಜ್ಞತೆ ಸಲ್ಲಿಸಿದರು.
ಸಿಯೋನ್ ಆಶ್ರಮದ ಸೇವೆಯನ್ನು ಡಾ. ಹೆಗ್ಗಡೆಯವರು ಶ್ಲಾಘಿಸಿದರು. ಹೇಮಾವತಿ ವೀ. ಹೆಗ್ಗಡೆಯವರು ಆಶ್ರಮದ ಸೇವಾಕಾರ್ಯಗಳಿಗೆ ಶುಭಹಾರೈಸಿದರು.
ಸಿಯೋನ್ ಆಶ್ರಮದ ಮೇರಿ ಯುಪಿ, ಶೋಭಾ ಯುಪಿ, ಸುಭಾಶ್ ಯು.ಪಿ. ಸೌಮ್ಯ ಯುಪಿ, ಮ್ಯಾಥ್ಯೂ ಸಿಎ, ಲಿಡ್ವಿನ್ ಆಂಟೋನಿ ಉಪಸ್ಥಿತರಿದ್ದರು.