News Karnataka Kannada
Saturday, April 27 2024
ಕರಾವಳಿ

ಕಾಣಿಯೂರು: ಅಕ್ರಮವಾಗಿ ಇರಿಸಿಕೊಂಡಿದ್ದ ಕೋವಿ ವಶಕ್ಕೆ

Photo Credit :

ಕಾಣಿಯೂರು: ಅಕ್ರಮವಾಗಿ ಇರಿಸಿಕೊಂಡಿದ್ದ ಕೋವಿ ವಶಕ್ಕೆ

ಪುತ್ತೂರು: ದಾಖಲೆಗಳಿಲ್ಲದೆ ಇರಿಸಿಕೊಂಡಿರುವ ಅಕ್ರಮ ನಾಡಬಂದೂಕನ್ನು ಕಾಣಿಯೂರು ಬಳಿ ಕೇರಳ ಮೂಲದ ವ್ಯಕ್ತಿಯೋರ್ವರಿಂದ ಬೆಳ್ಳಾರೆ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೇರಳದ ಎರ್ನಾಕುಲಂ ಪೆರಂಬವೂರು ಕಳಕ್ಕೆಪುರತ್ತಕುಡಿ ಬೈಜು ಎಂಬವರ ಪುತ್ರ ಚಲ್ಲಪ್ಪನ್(45ವ)ರವರು ದಾಖಲೆಗಳಿಲ್ಲದ ಅಕ್ರಮ ನಾಡಬಂದೂಕನ್ನು ಇಟ್ಟುಕೊಂಡಿದ್ದರು. ಖಚಿತ ಮಾಹಿತಿ ಪಡೆದ ಬೆಳ್ಳಾರೆ ಠಾಣೆಯ ಎಸ್.ಐ ಈರಯ್ಯ ಮತ್ತು ಸಿಬಂದಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅವರ ನಿರ್ದೇಶನದಂತೆ ಪುತ್ತೂರು ಉಪವಿಭಾಗದ ಡಿವೈಎಸ್ಪಿ ದಿನಕರ್ ಶೆಟ್ಟಿ ಮತ್ತು ಸುಳ್ಯ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಅಕ್ರಮ ಕೋವಿ ಇರಿಸಿಕೊಂಡಿದ್ದ ಚಲ್ಲಪ್ಪನ್ ಅವರನ್ನು ಕಾಣಿಯೂರು ಗ್ರಾಮದ ಬಳಿ ಫೆ. 12ರಂದು ಹಿಡಿದು ತಪಾಸಣೆ ನಡೆಸಿದ ವೇಳೆ ಅವರಿಂದ ನಾಡ ಬಂದೂಕನ್ನು ವಶಕ್ಕೆ ಪಡೆದು ಕೊಂಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
185

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು