ಮಂಗಳೂರು: ಆಗಸ್ಟ್ 28ರಂದು ಭಾನುವಾರ ಉಳ್ಳಾಲದ ರಾಣಿ ಅಬ್ಬಕ್ಕ ಸರ್ಕಲ್ ಸಮೀಪ ಸ್ಥಾಪಿಸಲಾಗಿರುವ ಆತ್ಯಾಧುನಿಕ ಹೊಸ ವ್ಯೆದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಸರೋಜ್ ಮಲ್ಟಿ ಸ್ಪೆಶಾಲೆಟಿ ಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ.ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಶ್ರೀ ಬಿ ರಮಾನಾಥ ರೈ ಅವರ ಘನ ಅಧ್ಯಕ್ಷತೆಯಲ್ಲಿ ಹಾಗು ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಶ್ರೀ ಯು.ಟಿ ಖಾದರ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಲಿದೆ.
ಸುದ್ಧೀಗೊಷ್ಟಿಯಲ್ಲಿ ಮಾತಾಡಿದ ಸರೋಜ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ವ್ಯೆದ್ಯಕೀಯ ನಿರ್ದೇಶಕ ಮತ್ತು ವ್ಯವಸ್ಥಾಪಕ ಪಾಲುದಾರರಾದ ಡಾ. ಗಜಾನನ ಪ್ರಭು ಎನ್ “ ಸೌಕರ್ಯ, ಸೌಖ್ಯ ಮತ್ತು ಶಮನ ಎಂಬ ಗುರಿಯೊಂದಿಗೆ ಆರಂಭಿಸಲಾಗಿರುವ ಸರೋಜ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯು ಉಳ್ಳಾಲ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಒಂದು ವರದಾನವಾಗಲಿದೆ. ಇದು ನೂರು ಹಾಸಿಗೆಯ ಹಾಗು ಆಧುನಿಕ ವ್ಯೆದ್ಯಕೀಯ ಸೌಲಭ್ಯಗಳೊಂದಿಗೆ ಪ್ರತಿಯೊಂದು ವಿಭಾಗದಲ್ಲೂ ನುರಿತ ವ್ಯೆದ್ಯರ ತಂಡ, ಅನುಭವಿ ದಾದಿಯರ ಮತ್ತು ತರಬೇತಿ ಪಡೆದ ಪ್ಯಾರಾ ವ್ಯೆದ್ಯಕೀಯ ಸಿಬ್ಬಂದಿಗಳನ್ನು ಹೊಂದಿರುತ್ತದೆ. ತಾಯಿ ಮತ್ತು ಮಕ್ಕಳ ಆರೋಗ್ಯ ಸೇವಾ ಹಾಗು ಚಿಕಿತ್ಸಾ ಸೌಲಭ್ಯಗಳನ್ನು ನೀಡುವುದು ಆಸ್ಪತ್ರೆಯ ಆದ್ಯತೆಯಾಗಿದ್ದು ತೀವ್ರ ನಿಗಾ ಘಟಕ, ತುರ್ತು ರಕ್ಷಣಾ ಘಟಕ, ಹೈರಿಸ್ಕ್ ಪ್ರಕರಣಗಳನ್ನು ನಿರ್ವಹಿಸಬಲ್ಲ ಅತ್ಯುತ್ತಮ ಆಪರೇಷನ್ ಥಿಯೇಟರ್ ಸೌಲಭ್ಯಗಳು ಆಸ್ಪತ್ರೆಯಲ್ಲಿ ಲಭ್ಯವಿರುತ್ತದೆ.”
ಉಳ್ಳಾಲ ಗ್ರಾಮೀಣ ಪ್ರದೇಶವಾಗಿರುವುದರಿಂದ ಚಿಕಿತ್ಸೆಯ ವೆಚ್ಚವು ಸಮಾಜದ ಎಲ್ಲ ವರ್ಗಗಳ ಜನರಿಗೆ ಸೌಲಭ್ಯವಾಗುವಂತೆ ಪ್ರಯತ್ನ ಮಾಡಲಾಗಿದೆ. ಕರಾವಳಿ ತೀರದ ಪ್ರಶಾಂತ ಪರಿಸರದಲ್ಲಿ ಸ್ಥಾಪನೆಯಾಗಿರುವುದರಿಂದ ಭಾರತೀಯ ವೈದ್ಯಕೀಯಶಾಸ್ತ್ರದ ಆಯುರ್ವೇದ ಪಂಚಕರ್ಮ ಮತ್ತು ನೆಚುರೊಥೆರಫಿ ಹಾಗೂ ಫಿಸಿಯೋಥೆರಪಿ ಆರೈಕೆ ವಿಭಾಗಳನ್ನು ಕೂಡ ಆರಂಭಿಸಲು ಉದ್ದೇಶಿಸಿದೆ.
ಆಸ್ಪತ್ರೆಯು ಪ್ರಶಾಂತ ವಾತಾವರಣದ ಜೊತೆಗೆ ಬೀಚ್ ಕೂಡ ಹೊಂದಿದೆ. ಆಸ್ಪತ್ರೆಯು ನಾಗರಿಕರ ಸೌಲಭ್ಯಕ್ಕಾಗಿ ಮೂರು ಪ್ರವೇಶ ಮತ್ತು ನಿರ್ಗಮನ ಹಾದಿಗಳನ್ನು ಹೊಂದಿದೆ.ಮಂಗಳೂರು ಮಣಿಪಾಲಗಳಂತೆ ತಾಯಿ ಮತ್ತು ಮಕ್ಕಳ ಕೇರ್ ಘಟಕ ಈ ಪ್ರದೇಶದಲ್ಲಿ ಸಾಕಷ್ಟು ಇಲ್ಲದಿರುವುದರಿಂದ ನಾವು ನಮ್ಮ ಆಸ್ಪತ್ರೆಯಲ್ಲಿ ಈ ಸೌಲಭ್ಯ ಒದಗಿಸುತ್ತಿದ್ದೇವೆ ಎಂದು ಹೇಳಿದರು.