ಮಂಗಳೂರು: ಆಂಬುಲೆನ್ಸ್ ಗೆ ದಾರಿ ಬಿಟ್ಟು ಕೊಡಲೇ ಬೇಕಾದದ್ದು ಪ್ರತಿಯೊಬ್ಬ ವಾಹನ ಚಾಲಕನ ಜವಾಬ್ದಾರಿ. ಆದರೆ ಂಂಗಳೂರಿನ ಕಾರು ಚಾಲಕನೊಬ್ಬ ದಾರಿ ನೀಡದೆ ಪೋಲೀಸ್ ವಿಚಾರಣೆ ಎದುರಿಸುತಿದ್ದಾನೆ. ಕಾರು ಹಾಗೂ ಚಾಲಕ ಕುಂಪಲ ನಿವಾಸಿ ಚರಣ್ ರಾಜ್ ಎಂಬಾತನನ್ನು ಕಂಕನಾಡಿ ನಗರ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತೊಕ್ಕೊಟ್ಟು ಕಡೆಯಿಂದ ಪಂಪುವೆಲ್ ಕಡೆಗೆ ಬರುತ್ತಿದ್ದ ಆಂಬುಲೆನ್ಸ್ ಎದುರಲ್ಲಿ ಹೋಗುತ್ತಿದ್ದ ಕಾರು ಚಾಲಕ ಸೈಡ್ ಕೊಡದೆ ಅಜಾಗರೂಕತೆಯಿಂದ ಚಲಾಯಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ತುರ್ತು ವಾಹನ ಸಾಗುವಾಗ ಅಡ್ಡಿ ಉಂಟು ಮಾಡಿದರೆ ಒಂದು ಸಾವಿರ ರೂಪಾಯಿ ದಂಡ ಅಥವಾ ಆರು ತಿಂಗಳು ಜೈಲು ವಾಸ ಅನುಭವಿಸುವ ಶಿಕ್ಷೆ ಇದೆ.
ಆಂಬುಲೆನ್ಸ್ ಗೆ ದಾರಿ ನೀಡದ ಕಾರು ಪೋಲೀಸ್ ವಶ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.