ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ನಡೆಯುತ್ತಿರುವ ಜಿಲ್ಲಾಡಳಿತದ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದಾರೆ.
1060 ಕೋಟಿ ರೂ. ವೆಚ್ಚದ ಅಡಿಗಲ್ಲು ಸಮಾರಂಭದಲ್ಲಿ ಭಾಗಿಯಾಗಿದ್ದೇನೆ. ದೇವತ್ಕಲ್ ಗ್ರಾಮದಲ್ಲಿ ಇಂದು ಮಾರ್ಚ್ 19 ಐತಿಹಾಸಿಕ ದಿನ. 1060 ಕೋಟಿಯ ಕಾಮಗಾರಿಗಳಿಗೆ ಚಾಲನೆ ನೀಡ್ತಾಯಿರೋದು ದಾಖಲೆ. ಇದಕ್ಕಿಂತ ಹೆಚ್ಚಾಗಿ ನೀಮ್ಮ ಪ್ರೀತಿ ದೊಡ್ಡದ್ದು. ಅದಕ್ಕೆ ಬೆಲೆ ಕಟ್ಟಲು ಆಗಲ್ಲ. ಸರ್ಕಾರ ಶ್ರೀಮಂತವಾಗಿರಬೇಕಾ? ಜನ ಶ್ರೀಮಂತರಾಗಿರಬೇಕಾ? ಜನ ಶ್ರೀಮಂತರಾದರೆ ಸರ್ಕಾರ ಶ್ರೀಮಂತ ಆಗುತ್ತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ನೀರಾವರಿ ಯೋಜನೆ ಜಾರಿಗೆ ಬರಬೇಕು ಅಂದರೆ ನಾಲ್ಕು ಸರ್ಕಾರ ಬದಲಾಗಬೇಕು. ಒಂದು ಸರ್ಕಾರ ಮಂಜೂರು ಮಾಡಬೇಕು, ಇನ್ನೋಂದು ಸರ್ಕಾರ ಚಾಲನೆ ನೀಡಬೇಕು. ಮೂರನೇ ಸರ್ಕಾರ ಹಣ ಬಿಡುಗಡೆ ಮಾಡಬೇಕು. ನಾಲ್ಕನೇ ಸರ್ಕಾರ ಅದಕ್ಕೆ ಉದ್ಘಾಟನೆ ಮಾಡಬೇಕು. ಆದ್ರೆ ನಮ್ಮ ಸರ್ಕಾರ ಈ ಸಂಪ್ರದಾಯ ಬದಲಿಸಲಿದೆ ಎಂದು ತಿಳಿಸಿದ್ದಾರೆ.