ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ನಡೆಯುತ್ತಿರುವ ಜಿಲ್ಲಾಡಳಿತದ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದಾರೆ.
1060 ಕೋಟಿ ರೂ. ವೆಚ್ಚದ ಅಡಿಗಲ್ಲು ಸಮಾರಂಭದಲ್ಲಿ ಭಾಗಿಯಾಗಿದ್ದೇನೆ. ದೇವತ್ಕಲ್ ಗ್ರಾಮದಲ್ಲಿ ಇಂದು ಐತಿಹಾಸಿಕ ದಿನ. 1060 ಕೋಟಿಯ ಕಾಮಗಾರಿಗಳಿಗೆ ಚಾಲನೆ ನೀಡ್ತಾಯಿರೋದು ದಾಖಲೆ. ಇದಕ್ಕಿಂತ ಹೆಚ್ಚಾಗಿ ನೀಮ್ಮ ಪ್ರೀತಿ ದೊಡ್ಡದ್ದು. ಅದಕ್ಕೆ ಬೆಲೆ ಕಟ್ಟಲು ಆಗಲ್ಲ. ಸರ್ಕಾರ ಶ್ರೀಮಂತವಾಗಿರಬೇಕಾ.? ಜನ ಶ್ರೀಮಂತರಾಗಿರಬೇಕಾ? ಜನ ಶ್ರೀಮಂತರಾದರೆ ಸರ್ಕಾರ ಶ್ರೀಮಂತ ಆಗುತ್ತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ನಾವು ಮೂರು ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ನಾವು ಪೂರ್ತಿ ಹಣ ಬಳಕೆ ಮಾಡುತ್ತೇವೆ. ನಮ್ಮ ಸರ್ಕಾರ ರೈತ ಪರವಾಗಿರುವ ಸರ್ಕಾರ.
ಹತ್ತು ಲಕ್ಷ ರೈತರಿಗೆ ಸಾಲ ಕೊಡುವ ಕೆಲಸ ಮಾಡುತ್ತೇವೆ. 300 ಕೋಟಿ ರೂ. ಕೊಟ್ಟು ಯಶಸ್ವಿನಿ ಯೋಜನೆ ಆರಂಭಿಸುತ್ತೇವೆ. ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿ ಅಪೌಷ್ಟಿಕತೆಯಿದೆ.
ಆರೋಗ್ಯ, ಶಿಕ್ಷಣ ಹಾಗೂ ಅಪೌಷ್ಟಿಕತೆ ನಿವಾರಣೆಗಾಗಿ ಜನ ಕಲ್ಯಾಣ ಯೋಜನೆಯಲ್ಲಿ ಮೂರು ಸಾವಿರ ಕೋಟಿ ಮೀಸಲಿಟ್ಟಿದ್ದೇವೆ. ಯಾದಗಿರಿ ಜಿಲ್ಲೆ ರಚನೆಯಾದಾಗ ನಾವು ಸ್ವಲ್ಪ ದಿನ ಉಸ್ತುವಾರಿ ಸಚಿವನಾಗಿದ್ದೆ. ಎಲ್ಲದ್ದಕ್ಕೂ ಯಸ್ ಎನ್ನುವ ರೀತಿಯಲ್ಲಿ ರಾಜುಗೌಡ ನಮ್ಗೆ ಮಾಟಮಂತ್ರ ಮಾಡಿದ್ದಾನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ನಗೆ ಚಟಾಕಿ ಹಾರಿಸಿದ್ದಾರೆ.