ವಿಜಯನಗರ: ಪಂಚಮಸಾಲಿ ಸಮಾಜ 2ಎ ಮೀಸಲಾತಿ ವಿಚಾರದಲ್ಲಿ ಶಾಸಕರು, ಸಂಸದರು ತಮ್ಮನ್ನು ‘ಉತ್ಸವ ಮೂರ್ತಿ’ ಮಾಡಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ವೀರರಾಣಿ ಕಿತ್ತೂರು ಚನ್ನಮ್ಮನ 199ನೇ ಜಯಂತ್ಯುತ್ಸವ ಹಾಗೂ ಪಂಚಮಸಾಲಿ 2ಎ ಮೀಸಲಾತಿ ಜನಜಾಗೃತಿ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಸಚಿವ ಆನಂದ್ ಸಿಂಗ್ ಅವರು ಉತ್ಸವ ಮೂರ್ತಿಯಾಗಿದ್ದಾರೆ ಹಾಗೂ 2 ಮೀಸಲಾತಿಗೆ ಮುಂಚೂಣಿಯಲ್ಲಿರುತ್ತೇನೆ ಎಂದು ಹೇಳುತ್ತಿದ್ದರೂ ಪರವಾಗಿಲ್ಲ. ಮೀಸಲಾತಿಗಾಗಿ ಸರಕಾರ ಮತ್ತು ಸಮಾಜದ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಶಾಸಕರಾದ ಪಿ.ಟಿ.ಪರಮೇಶ್ವರ ನಾಯ್ಕ್, ಭೀಮಾ ನಾಯ್ಕ್, ಸಂಸದ ಕರಡಿ ಸಂಗಣ್ಣ, ವೈ.ದೇವೇಂದ್ರಪ್ಪ ಸೇರಿದಂತೆ ಗಣ್ಯರು ಮಾತನಾಡಿ, ವಿಜಯನಗರ ಜಿಲ್ಲೆಯನ್ನು ರಚಿಸಿದ ಆನಂದ್ ಸಿಂಗ್ ಅವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಹೀಗಾಗಿ ಮೀಸಲಾತಿಯ ಜವಾಬ್ದಾರಿಯನ್ನು ಆನಂದ್ ಸಿಂಗ್ ಅವರಿಗೆ ವಹಿಸಿದರೆ ಮೀಸಲಾತಿ ಬೇಡಿಕೆ ಸುಲಭವಾಗಿ ಈಡೇರುತ್ತದೆ ಎಂದು ಆಶಿಸಿದರು.