News Karnataka Kannada
Friday, May 03 2024
ವಿಜಯನಗರ

ಹಂಪಿ ಜಿ20: 3ನೇ ಸಿಡಬ್ಲ್ಯೂಜಿ ಸಂಸ್ಕೃತಿ ಸಭೆ ಉದ್ಘಾಟಿಸಿದ ಪ್ರಲ್ಹಾದ್ ಜೋಶಿ

hampi g20 summit
Photo Credit : Twitter

ವಿಜಯನಗರ: ಇಂದು (ಜು.10) ಹಂಪಿಯಲ್ಲಿ ಆಯೋಜಿಸಲಾಗಿದ್ದ ಮೂರನೇ ಜಿ 20 ಸಂಸ್ಕೃತಿ ವರ್ಕಿಂಗ್ ಗ್ರೂಪ್ (ಸಿಡಬ್ಲ್ಯೂಜಿ) ಸಭೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು, ನಾವು ನಾಲ್ಕು ಆದ್ಯತೆಗಳನ್ನು ಗುರುತಿಸುವ ಮತ್ತು ಚರ್ಚಿಸುವ ಮೂಲಕ ಈ ಸಭೆಯನ್ನು ನಡೆಸಲು ಮುಂದಾಗಿದ್ದೇವೆ. ಹಂಪಿ ನಮ್ಮ ದೇಶದ ಸಂಸ್ಕೃತಿ ಹೃದಯಭಾಗ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಡುತ್ತಿದೆ.

ನಮ್ಮ ಮುಂದೆ ಇರುವ 4 ಆದ್ಯತೆಯ ಕ್ಷೇತ್ರಗಳೆಂದರೆ, 1. ಸಾಂಸ್ಕೃತಿಕ ಆಸ್ತಿಯ ರಕ್ಷಣೆ ಮತ್ತು ಪುನರ್​ರಚನೆ, 2. ಸುಸ್ಥಿರ ಭವಿಷ್ಯಕ್ಕಾಗಿ ಲಿವಿಂಗ್ ಹೆರಿಟೇಜ್ ಬಳಸಿಕೊಳ್ಳುವುದು, 3. ಸಾಂಸ್ಕೃತಿಕ ಮತ್ತು ಸೃಜನಾತ್ಮಕ ಕೈಗಾರಿಕೆಗಳು ಮತ್ತು ಸೃಜನಾತ್ಮಕ ಆರ್ಥಿಕತೆಯ ಪ್ರಚಾರ, 4. ಸಂಸ್ಕೃತಿಯ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಡಿಜಿಟಲ್ ತಂತ್ರಜ್ಞಾನಗಳನ್ನು ನಿಯಂತ್ರಿಸುವುದು ಎಂದು ಹೇಳಿದರು.
ಈ ಸಭೆಯಲ್ಲಿ ಸದಸ್ಯ ರಾಷ್ಟ್ರಗಳ ಅಮೂಲ್ಯ ಕೊಡುಗೆಗಳನ್ನು ಎತ್ತಿ ಹಿಡಿಯುವುದು ಕೂಡ ಒಂದು ಪ್ರಮುಖ ಕಾರ್ಯವಾಗಿದೆ. G20ಯಲ್ಲಿ ಪ್ರಾಥಮಿಕ ಕರಡು ಪ್ರತಿಯ ಒಳನೋಟದ ಬಗ್ಗೆ ನೀವು ಕೂಡ ಹಂಚಿಕೊಳ್ಳಲು ಇದು ಸದವಕಾಶ ಎಂದು ಹೇಳಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು