ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ಹಟ್ಟಿಯಲ್ಲಿ ಲಘು ಭೂಕಂಪ ಸಂಭವಿಸಿದೆ. ಈ ಘಟನೆಯಿಂದ ಹಟ್ಟಿ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಲಘು ಭೂಕಂಪದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆಯಲ್ಲಿ ಭೂಕಂಪ ದಾಖಲಾಗಿದೆ.
ರಾತ್ರಿ 2.51 ನಿಮಿಷಕ್ಕೆ ಲಘು ಭೂಕಂಪ ಸಂಭವಿಸಿದೆ. ಇನ್ನು ದೇಶದಲ್ಲೇ ಚಿನ್ನ ಉತ್ಪಾದಿಸುವ ಏಕೈಕ ಹಟ್ಟಿ ಚಿನ್ನದ ಗಣಿ ಇದಾಗಿದೆ. ಇಲ್ಲಿ ಆಳದಲ್ಲಿ ಗಣಿಗಾರಿಕೆ ಹತ್ತಾರು ಕಿ.ಮೀ ವ್ಯಾಪಿಸಿದ್ರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.