ರಾಯಚೂರು : ಗಂಡನ ಸಾವಿನಿಂದ ಮನನೊಂದ ಗರ್ಭಿಣಿಯೊಬ್ಬರು ತನ್ನಿಬ್ಬರು ಮಕ್ಕಳೊಂದಿಗೆ ತುಂಗಭದ್ರಾ ನದಿಗೆ ಹಾರಿ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ದಢೇಸೂಗೂರಿನಲ್ಲಿ ನಡೆದಿದೆ. ಗರ್ಭಿಣಿ ಚೆನ್ನಮ್ಮ(35), ಸುಮಿತ್ರಾ(7) ಮತ್ತು ಪ್ರಶಾಂತ್(5) ಮೃತ ದುರ್ದೈವಿಗಳು. ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲಿಂದ ಜಿಗಿದು ಪ್ರಾಣಬಿಟ್ಟಿದ್ದಾರೆ.
ಇತ್ತೀಚೆಗೆ ಚೆನ್ನಮ್ಮ ಅವರ ಪತಿ ರವಿ ಕೊರೋನಾ ಸೋಂಕಿಗೆ ಮೃತಪಟ್ಟಿದ್ದರು, ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದ ಚೆನ್ನಮ್ಮಗೆ ಆಕೆಯ ಪತಿಯ ಸಾವು ತೀವ್ರ ನೋವನ್ನುಂಟು ಮಾಡಿತ್ತು. ಈ ಆಘಾತದಿಂದ ಹೊರಬರಲು ಸಾಧ್ಯವಾಗದೆ ಚೆನ್ನಮ್ಮ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.