ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಆರ್ ಹೆಚ್ 3 ಕ್ಯಾಂಪ್ ಬಳಿ ಪ್ರೇಮಿಗಳಿಬ್ಬರೂ ಒಂದೇ ಸೀರೆಯ ಎರಡು ತುದಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಲವ ಹಾಗೂ ಕರೀನಾ ಮೃತ ಪ್ರೇಮಿಗಳು.
ಲವ ಹಾಗೂ ಕರೀನಾ ಪರಸ್ಪರ ಪ್ರೀತಿಸುತ್ತಿದ್ದರು.ಆದರೆ ಮದುವೆಗೆ ಮನೆಯವರ ವಿರೋಧವಿತ್ತು. ಎರಡು ತಿಂಗಳ ಹಿಂದೆ ಲವ ಮನೆಯವರ ಒತ್ತಾಯಕ್ಕೆ ಬೇರೊಂದು ಯುವತಿಯೊಂದಿಗೆ ವಿವಾಹವಾಗಿದ್ದ.
ಇದೀಗ ಲವ ಹಾಗೂ ಕರೀನಾ ಇಬ್ಬರೂ ಜಮೀನಿನಲ್ಲಿ ಮರಕ್ಕೆ ಒಂದೇ ಸೀರೆಯ ಎರಡು ತುದಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿಂಧನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.