ಕಲಬುರಗಿ: ಭೀಕರ ಬರಗಾಲ ಎದುರಿಸುತ್ತಿರುವ ಕರ್ನಾಟಕದ ಜನತೆಗೆ ಕುಡಿಯುವ ನೀರು ಸಿಗದಂತಹ ಪರಸ್ಥಿತಿ ಎದುರಾಗಿದೆ.
ಅಫಜಲಪುರ ತಾಲೂಕಿನ ದಿಕ್ಸಂಗಾ(ಕೆ) ಗ್ರಾಮದ ಜೈಭೀಮ ನಗರದ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದ ಯುವ ಮುಖಂಡ ಪ್ರಶಾಂತ ಮ್ಯಾಕೇರಿ ಸತತ ಪತ್ರಗಳ ಮುಖಾಂತರ ಅಧಿಕಾರಿಗಳಿಗೆ ಮನವಿ ಮಾಡಿ ಬೋರ್ ವೇಲ್ ಯಶಸ್ವಿಯಾಗಿದ್ದಾರೆ .
ಸಂತಸದ ವಿಷಯವೇನೆಂದರೆ ಅಧಿಕಾರಿಗಳಿಗೆ ನೀರಿನ ಸಮಸ್ಯೆಯನ್ನು ಹತ್ತು ಹಲವು ಬಾರಿ ತಿಳಿಸಿ ಗ್ರಾಮದ ಜನರಿಗೆ ಕುಡಿಯುವ ನೀರು ಒದಗಿಸಲು ಪರದಾಡಿದ ಮ್ಯಾಕೇರಿ ಪ್ರಯತ್ನಕ್ಕೆ ಬೋರ್ ವೇಲ್ ನಲ್ಲಿ ನೀರು ಬಂದಿದೆ.
ಇದರಿಂದ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಕ್ಕಮಟ್ಟಿಗೆ ಬಗೆಹರಿದಂತೆ ಕಾಣುತ್ತಿದೆ. ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿದ ಅಧಿಕಾರಿ ವೃಂದಕ್ಕೆ ಪ್ರಶಾಂತ ಮ್ಯಾಕೇರಿ ಸೇರಿದಂತೆ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ.