ಕೊಪ್ಪಳ: ಕೆಆರ್ಪಿಪಿ ಸಂಸ್ಥಾಪಕ ಮತ್ತು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹನುಮ ಮಾಲೆ ಧರಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿದ ಜನಾರ್ದನ ರೆಡ್ಡಿ ನಂತರ ಹನುಮ ಮಾಲೆ ಧರಿಸಿದರು.
ಕಳೆದ ವರ್ಷ ಹನುಮನ ಪಾದಕ್ಕೆರಗಿ ಬೇಡಿಕೊಂಡಿದ್ದೆ. ಹೊಸ ಪಕ್ಷ ಸ್ಥಾಪನೆ ಮತ್ತು ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ್ದೆ. ನನ್ನ ಕಳೆದ ವರ್ಷದ ಸಂಕಲ್ಪವನ್ನು ಆಂಜನೇಯ ಈಡೇರಿಸಿದ್ದಾನೆ. ಈ ಬಾರಿ ರಾಜ್ಯಾದ್ಯಂತ ಪಕ್ಷ ವಿಸ್ತರಣೆ ಮತ್ತು ಕಿಷ್ಕಿಂದೆಯ ಅಭಿವೃದ್ಧಿ ಬಗ್ಗೆ ಸಂಕಲ್ಪ ಮಾಡಿರೋದಾಗಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಚಾತುರ್ಮಾಸದಲ್ಲಿ ಹನುಮ ಮಾಲೆಯನ್ನು ಹಾಕಿದರೆ ಇಷ್ಟಾರ್ಥಗಳು ಸಿದ್ದಿಸುತ್ತವೆ ಅನ್ನೋ ನಂಬಿಕೆ ಅನೇಕ ಆಂಜನೇಯನ ಭಕ್ತರಲ್ಲಿದೆ.