News Karnataka Kannada
Friday, May 03 2024
ಕೊಪ್ಪಳ

ಕೊಪ್ಪಳ: ಗಡ್ಡಿ ಗ್ರಾಮದಲ್ಲಿ ಬೋನಿಗೆ ಬಿದ್ದ ಕರಡಿ

Bear
Photo Credit : Freepik

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಗಡ್ಡಿ ಗ್ರಾಮದಲ್ಲಿ ನ.22ರ ಮಂಗಳವಾರ ರಾತ್ರಿ 11.00 ಗಂಟೆಗೆ ಏಳು ವರ್ಷದ ಕರಡಿಯೊಂದು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.

ಕಳೆದ ಹಲವು ತಿಂಗಳಿಂದ ಗಡ್ಡಿ, ಉಡುಮಕಲ್, ಆಗೋಲಿ, ವಿಟ್ಲಪುರ, ಬೆಣಕಲ್ ಭಾಗದಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಜಮೀನಿಗೆ ಹೋಗಿ ಬೆಳೆ ರಕ್ಷಣೆ ಮಾಡುವವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆಗಳು ನಡೆಯುತ್ತಿವೆ.

ಸಾರ್ವಜನಿಕರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಗಡ್ಡಿ ಗ್ರಾಮ ಸೇರಿದಂತೆ ಹಲವೆಡೆ ಬೋನು ಇಟ್ಟು ಕರಡಿ, ಚಿರತೆ ಸೆರೆಗೆ ಯೋಜನೆ ರೂಪಿಸಿತ್ತು. ಮಂಗಳವಾರ ರಾತ್ರಿ ಗಡ್ಡಿ ಗ್ರಾಮದಲ್ಲಿ ಕರಡಿ ಬೋನಿಗೆ ಬಿದ್ದಿತ್ತು.

ಸೆರೆ ಹಿಡಿದ ಕರಡಿಯನ್ನು ವೈದ್ಯಕೀಯ ಪರೀಕ್ಷೆಯ ನಂತರ ಬಳ್ಳಾರಿ ಜಿಲ್ಲೆಯ ಗುಡೇಕೋಟೆ ಕರಡಿಧಾಮಕ್ಕೆ ಬಿಡಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್ ಮೇಟಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು