News Karnataka Kannada
Saturday, May 04 2024
ಕಲಬುರಗಿ

ಕಮಲ ಪಡೆಗೆ ಜೈ ಎಂದ ಯುವ ಸಾರಥಿ: ಗೊಂದಲದ ಗೂಡಿಗೆ ತೆರೆ ಎಳೆಯುತ್ತಾ ರಾಜಕೀಯ

ಚುನಾವಣೆಗಳು ಸಮಿಪಿಸುತ್ತಿದ್ದಂತೆ ರಾಜಕೀಯ ವಿದ್ಯಮಾನಗಳು ಗದಿಗೇದರುವುದು ಸಹಜದ ಸಂಗತಿಯಾದರೂ,ಕಲಬುರಗಿ ಲೋಕ ಕದನದಲ್ಲಿ ಕಳೆದೆರೆಡು ಚುನಾವಣೆಗಳು ಮಹತ್ತರ ಬದಲಾವಣೆಗಳನ್ನು ಕಂಡಿವೆ.ಅದರಲ್ಲಿ ಮುಖ್ಯವಾಗಿ ಕಲಬುರಗಿ ಜಿಲ್ಲೆ ಖರ್ಗೆ ಕೋಟೆ ಎಂದೆ ರಾಜಕೀಯವಾಗಿ ಬಿಂಬಿತವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿರುವ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ತಮ್ಮ ಅಳಿಯ ರಾಧಾಕೃಷ್ಣ ದೊಡ್ಮನಿ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ.
Photo Credit : NewsKarnataka

ಕಲಬುರಗಿ: ಚುನಾವಣೆಗಳು ಸಮಿಪಿಸುತ್ತಿದ್ದಂತೆ ರಾಜಕೀಯ ವಿದ್ಯಮಾನಗಳು ಗದಿಗೇದರುವುದು ಸಹಜದ ಸಂಗತಿಯಾದರೂ, ಕಲಬುರಗಿ ಲೋಕ ಕದನದಲ್ಲಿ ಕಳೆದೆರೆಡು ಚುನಾವಣೆಗಳು ಮಹತ್ತರ ಬದಲಾವಣೆಗಳನ್ನು ಕಂಡಿವೆ.

ಅದರಲ್ಲಿ ಮುಖ್ಯವಾಗಿ ಕಲಬುರಗಿ ಜಿಲ್ಲೆ ಖರ್ಗೆ ಕೋಟೆ ಎಂದೆ ರಾಜಕೀಯವಾಗಿ ಬಿಂಬಿತವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿರುವ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ತಮ್ಮ ಅಳಿಯ ರಾಧಾಕೃಷ್ಣ ದೊಡ್ಮನಿ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ.

ಗದಿಗೇದರಿದ ರಾಜಕೀಯ ಚಿತ್ರಣಗಳ ಮಧ್ಯೆ ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಗಾಳಿ ಬಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ನಿತೀನ್ ಗುತ್ತೇದಾರ ಸುಮಾರು 52 ಸಾವಿರ ಮತಗಳನ್ನು ಪಡೆದು ಜಿಲ್ಲೆಯ ರಾಜಕೀಯದಲ್ಲಿ ತಮ್ಮ ಹೊಸ ಚಾಪು ಮೂಡಿಸಿದ್ದು ಪ್ರಚಲಿತ ವಿಷಯವಾಗಿದೆ.

ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಿ ತಾಲೂಕಿನ ಎಲ್ಲಾ ರಾಜಕೀಯ ಆಯಾಮಗಳಿಗೆ ಶಾಕ್ ನೀಡಿದ್ದಾರೆ‌. ಈಗಾಗಲೇ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ನಿತೀನ್ ಗುತ್ತೇದಾರ ಅವರ ಸಹೋದರರು ಬಿಜೆಪಿ ಪಕ್ಷದಲ್ಲಿದ್ದು, ನಿತೀನ್ ಗುತ್ತೇದಾರ ಸೇರ್ಪಡೆಗೆ ಯಾವ ರೀತಿಯಾಗಿ ಪ್ರತಿಕ್ರಿಯೆಸುತ್ತಾರೋ ತಿಳಿಯದಾಗಿದೆ.

ಇತ್ತ ಕಡೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶಾಸಕ ಎಮ್.ವೈ.ಪಾಟೀಲರು ನಿತೀನ್ ಗುತ್ತೇದಾರ ಕಾಂಗ್ರೆಸ್ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಸಕ್ಸಸ್ ಆಗಿದ್ದಾರೆ. ಆದರೆ ಅಸಲಿ ವಿಷಯವೇನೆಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ನೇರ ಹೊಣೆಗಾರಿಕೆಯ ಆರೋಪ ಹೊರಿಸಿದ ಬಿಜೆಪಿ ಪಕ್ಷದ ಮುಖಂಡರು ಕಳೆದು ಎರಡು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ನಿತೀನ್ ಗುತ್ತೇದಾರ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ ಇಂದು ಅದೇ ಪಕ್ಷಕ್ಕೆ ನಿತೀನ್ ಗುತ್ತೇದಾರ ಸೇರ್ಪಡೆಯಾಗಿದ್ದಾರೆ‌.

ಇಂದು ರಾಜ್ಯಾಧ್ಯಕ್ಷರ ಸಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ನಿತೀನ್ ಗುತ್ತೇದಾರ ಅವರಿಗೆ ಮಾಲೀಕಯ್ಯ ಗುತ್ತೇದಾರ ಅವರ ಬೆಂಬಲಿಗರು ಯಾವ ರೀತಿ ಸ್ವಿಕರಿಸುತ್ತಾರೆ ಎಂಬುವುದು ನಿಗೂಢವಾಗಿದೆ.ಇವೆಲ್ಲವೂಗಳ ಮಧ್ಯೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮತ್ತು ಶಾಸಕ ಎಮ್.ವೈ.ಪಾಟೀಲ ಒಂದುಗೂಡಿ ಒಂದೇ ಪಕ್ಷದಲ್ಲಿದ್ದರೂ ಆಶ್ಚರ್ಯವೆನಿಲ್ಲ ಎಂದು ಬಿಸಿ ಬಿಸಿ ಚರ್ಚೆಗಳು ಶುರುವಾಗಿವೆ. ಒಟ್ಟಾರೆಯಾಗಿ ಯುವ ಸಾರಥಿ ನಿತೀನ್ ಗುತ್ತೇದಾರ ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದೆ ಎನ್ನುವುದು ಒಂದು ಕಡೆ ಆದರೆ ಇನ್ನೊಂದು ಕಡೆ ಅಸಮಧಾನದ ಹೊಗೆ ಯಾವ ರೀತಿಯಾಗಿ ಬಗೆ ಹರಿಯುತ್ತದೆ ಎಂಬುವುದನ್ನು ಕಾದು ನೋಡೋಣ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು