News Karnataka Kannada
Monday, May 06 2024
ಕಲಬುರಗಿ

ಕಲಬುರಗಿ:  ಜಮೀನಿಗೆ ಹೋದ ಮಹಿಳೆಯ ಬರ್ಬರ ಹತ್ಯೆ

Woman's body found
Photo Credit : News Kannada

ಕಲಬುರಗಿ:  ಕುಕುನೂರು ಗ್ರಾಮದ ಹೊರವಲಯದಲ್ಲಿರುವ ಕೃಷಿ ಜಮೀನಿನಲ್ಲಿ ಮಹಿಳೆಯನ್ನ ತಲೆ ಮೇಲೆ ಕಲ್ಲು ಎತ್ತಿಹಾಕಿ ದುಷ್ಕರ್ಮಿಯೊಬ್ಬ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಮಹಿಳೆಯ ಕತ್ತು ಮತ್ತು ಕಿವಿಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿಕೊಂಡು, ನಂತರ ಶವವನ್ನು ಜಮೀನಿನಲ್ಲಿಯೇ ಇದ್ದ ಮಣ್ಣಿನಿಂದ ಮುಚ್ಚಿ ಪರಾರಿಯಾಗಿದ್ದಾನೆ.

ಕೊಲೆಯಾದ ಮಹಿಳೆಯ ಹೆಸರು ಗುರುಬಸಮ್ಮ. 56 ವರ್ಷದ ಗುರುಬಸಮ್ಮ, ಗ್ರಾಮದ ಹೊರವಲಯದಲ್ಲಿರುವ ತನ್ನ ಕೃಷಿ ಜಮೀನಿಗೆ ಪ್ರತಿನಿತ್ಯ ಹೋಗುತ್ತಿದ್ದದ್ದರು. ಅದರಂತೆ ಮೇ.14 ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಮನೆಯಿಂದ ಜಮೀನಿಗೆ ಹೋಗಿ ಬರುವುದಾಗಿ ಕುಟುಂಬದವರಲ್ಲಿ ಹೇಳಿ, ಹೋಗಿದ್ದರು. ಆದರೆ, ಸಂಜೆಯಾದ್ರು ಕೂಡ ಗುರುಬಸಮ್ಮ ಮನೆಗೆ ಬಂದಿರಲಿಲ್ಲವಂತೆ. ಹೀಗಾಗಿ ಕುಟುಂಬದವರು, ಗುರುಬಸಮ್ಮಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.  ಆದರೆ, ಎಲ್ಲಿಯೂ ಗುರುಬಸಮ್ಮ ಬಂದಿಲ್ಲಾ ಅನ್ನೋ ಮಾಹಿತಿ ತಿಳಿದಾಗ, ಜಮೀನಿಗೆ ಹೋಗಿ ನೋಡಿದ್ದಾರೆ.  ಜಮೀನಿನಲ್ಲಿ ಹುಡುಕಾಡಿದಾಗ ಕೊಲೆಯಾಗಿರುವುದ ಗೊತ್ತಾಗಿದೆ.  ಗುರುಬಸಮ್ಮಳನ್ನು ಕೊಲೆ ಮಾಡಿರುವ ದುಷ್ಕರ್ಮಿ, ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿರುವದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಜೊತೆಗೆ ಗ್ರಾಮದ ಓರ್ವ ವ್ಯಕ್ತಿ ಮೇಲೆ ಕುಟುಂಬದವರು ಮತ್ತು ಗ್ರಾಮದ ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಕೊಳವೆ ಬಾವಿ ನೀರು ನೋಡೋದಾಗಿ ಹೇಳಿ ಓಡಾಡುತ್ತಿದ್ದ ಓರ್ವ ವ್ಯಕ್ತಿಯೇ ಕೊಲೆ ಮಾಡಿರುವ ಅನುಮಾನ ಕುಟುಂಬದವರನ್ನು ಕಾಡುತ್ತಿದೆ. ಚಿನ್ನಾಭರಣಕ್ಕಾಗಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು