ಕಲಬುರಗಿ: ವಿಧಾನಸಭೆ ಉಪಸಭಾಪತಿ ಚಂದ್ರಶೇಖರ ಮಾಮನಿ ಅವರ ನಿಧನದ ಕಾರಣದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇಂದಿನ ಕಲಬುರಗಿ ಜಿಲ್ಲಾ ಪ್ರವಾಸ ರದ್ದಾಗಿದೆ.
ಮುಖ್ಯಮಂತ್ರಿ ಯವರು ಆಳಂದ ಪಟ್ಟಣದಲ್ಲಿ ಬಸವೇಶ್ವರ ಪುತ್ಥಳಿ ಅನಾವರಣಗೊಳಿಸಿ ತದನಂತರ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವವರಿದ್ದರು.
ಅದೇ ರೀತಿ ಚಿತ್ತಾಪುರ ಪಟ್ಟಣದಲ್ಲೂ ನಿಗದಿಯಾಗಿದ್ದ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವವರಿದ್ದರು. ಆದರೆ ಈಗ ಸಂಕಲ್ಪ ಯಾತ್ರೆ ಮುಂದೂಡಲಾಗಿದ್ದು, ನವ್ಹೆಂಬರ್ 6 ಕ್ಕೆ ನಿಗದಿಯಾಗಿದೆ.