ಕಲಬುರಗಿ: ನೀರಿಗಾಗಿ ಉಪವಾಸ ಸತ್ಯಾಗ್ರಹ, ಅಮರಣಾಂತ ಸತ್ಯಾಗ್ರಹ ಮಾಡುತ್ತಿರುವ ರೈತಪರ ಹೋರಾಟಗಳನ್ನು ಸರಳವಾಗಿ ತಿಳಿದರೆ ಜೋಕೆ. ಭೀಮಾತೀರದ ಜನರ ತಾಳ್ಮೆ ಪರೀಕ್ಷೆಗೆ ಮುಂದಾಗುವ ಮಹಾರಾಷ್ಟ್ರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ ದಯಾನಂದ ದೊಡ್ಮನಿ.
ಇಲ್ಲಿಯವರೆಗೆ ಕಲ್ಯಾಣ ನಾಡಿನ ಅಫಜಲಪುರ ಭಾಗದ ಜನರ ಶಾಂತಿಯುತ ಹೋರಾಟಗಳು ನೊಡಿದ್ದಿರಿ. ಕೆಂಡದಂತ ಬಿಸಿಲಿಗೂ ಕ್ಯಾರೆ ಎನ್ನದ ಭೀಮಾತೀರದ ಜನರ ಕೋಪ ನೆತ್ತಿಗೆರಿದರೆ,ಯಾವುದೇ ಸರಕಾರ ಬಂದರೂ ತಡೆಯೊಕ್ಕಾಗೊದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋರ್ಟ್ ತೀರ್ಪಿನ ವಿರುದ್ಧ ನಡೆದುಕೊಳ್ಳುವ ಮಹಾರಾಷ್ಟ್ರ ಸರಕಾರದ ನಿಲುವಿಗೆ ಗಡಿಯಲ್ಲಿರುವ ಕನ್ನಡಿಗರೆ ಸಾಕು. ಕಾನೂನು ರೀತಿಯಲ್ಲಿ ಬಗ್ಗದ ಅವರಿಗೆ ಯಾವ ರೀತಿಯಾಗಿ ಬಗ್ಗಿಸಬೇಕು ಎಂಬುವುದು ಗೊತ್ತಿದೆ. ಭೀಕರ ಬರಗಾಲ ಸಮಸ್ಯೆ ಎದುರಿಸುತ್ತಿರುವ ನಮ್ಮ ಜನರಿಗೆ ವ್ಯವಸಾಯ ಮಾಡುವುದಿರಲ್ಲಿ,ಕುಡಿಯಲು ನೀರು ಬೀಡುತ್ತಿಲ್ಲ ಎಂದರೆ ಮಹಾರಾಷ್ಟ್ರ ಸರಕಾರ ಮನುಷ್ಯತ್ವ ಮತ್ತು ಮಾನವೀಯ ಮೌಲ್ಯಗಳನ್ನು ಕಳೆದುಕೊಂಡಿದೆ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದರು.
ಕೂಡಲೇ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಹಾರಾಷ್ಟ್ರ ಸರಕಾರಕ್ಕೆ ಕಾನೂನು ಚಾಟಿ ಬಿಸುವ ಮುಖಾಂತರ ಕರ್ನಾಟಕಕ್ಕೆ ಬರಬೇಕಾದ ಪಾಲನ್ನು ಬರುವಂತೆ ಮಾಡಬೇಕು ಇಲ್ಲವಾದರೆ ಯಾವ ಸರಕಾರವನ್ನು ಲೆಕ್ಕಿಸದೆ ಪಕ್ಷಾತೀತವಾಗಿ,ಜಾತ್ಯಾತೀತವಾಗಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಾಲೂಕಿನ ಜನರನ್ನುದ್ದೇಶಿಸಿ ಮಾತನಾಡಿದ ಅವರು ಶಿವಕುಮಾರ ನಾಟಿಕಾರ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೆ ಕೆಲವೊಬ್ಬರು ನಮಗೆ ಸಂಬಂಧವೇ ಇಲ್ಲ ಎಂಬಂತೆ ರಸ್ತೆಯ ಮೇಲೆ ಓಡಾಡುತ್ತಿದ್ದಾರೆ. ಹಾಗೆ ಓಡಾಡುವ ಜನರು ನೀರು ಕುಡಿಯದೆ ಬದುಕುತ್ತಾರೊ ಏನೊ ಗೊತ್ತಿಲ್ಲ. ನಾಟಿಕಾರ ನಮ್ಮೆಲ್ಲರ ಸಲುವಾಗಿ ಕುಡಿಯುವ ನೀರಿಗಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ನಾವೆಲ್ಲರೂ ಅವರಿಗೆ ಬೆಂಬಲವಾಗಿ ನಿಂತುಕೊಳ್ಳಬೇಕು.
ದೇಶವೆ ತಿರುಗಿ ನೋಡುವಂತಹ ಒಗ್ಗಟ್ಟು ಪ್ರದರ್ಶಿಸಿದ್ದಾಗ ಮಾತ್ರ ನಮಗೆ ನ್ಯಾಯ ದೊರಕುತ್ತದೆ ಎಂದರು. ಈಗಾಗಲೇ ಕಲಬುರಗಿ ಉಸ್ತುವಾರಿ ಸಚಿವರೊಂದಿಗೆ ನಾನು ಮಾತನಾಡಿದ್ದೆನೆ ನ್ಯಾಯ ಸಮ್ಮತವಾಗಿ ಮಹಾರಾಷ್ಟ್ರ ನೀರು ಹರಿಸಬೇಕು.ಆದರೆ ತಪ್ಪು ಮಾಹಿತಿಗಳನ್ನ ನೀಡಿ ಉಜ್ಜಯಿನಿ ಜಲಾಶಯದಲ್ಲಿ ನೀರು ಖಾಲಿಯಾಗಿರುವ ಸುಳ್ಳು ಸುದ್ದಿ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಭೀಮಾ ನದಿಗೆ ನೀರು ಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ನೀರು ಹರಿಸದಿದ್ದರೆ ಮುಂದಿನ ತೀರ್ಮಾನವನ್ನು ನಾವೆಲ್ಲರೂ ಒಗ್ಗೂಡಿ ತಗೆದುಕೊಳ್ಳೊಣ.ಈಗಾಗಲೇ ತಾಲೂಕಿನ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಬೆಂಬಲವನ್ನು ಸೂಚಿಸಿದ್ದಾರೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕೆ ಸಿಗುತ್ತದೆ ನಾವೆಲ್ಲರೂ ಶಿವಕುಮಾರ ನಾಟಿಕಾರ ಅವರ ಬೆಂಬಲಕ್ಕೆ ನಿಂತುಕೊಳ್ಳೊಣ ಎಂದರು.