News Karnataka Kannada
Monday, April 29 2024
ಕಲಬುರಗಿ

ಕೆಇಎ ಅಕ್ರಮ: ಕಲಬುರಗಿಯಲ್ಲಿ ಸಿಐಡಿ ಉನ್ನತ ಮಟ್ಟದ ತಂಡದಿಂದ ತನಿಖೆ ಶುರು

KEA irregularities: CID team begins probe in Kalaburagi
Photo Credit : News Kannada

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ವಿವಿಧ ಹುದ್ದೆಗಳ ನೇಮಕಾತಿಯ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಪ್ರಕರಣ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದ್ದರಿಂದ ಉನ್ನತ ಮಟ್ಟದ ತಂಡವು ಸೋಮವಾರ ನಗರಕ್ಕಾಗಮಿಸಿ ತನಿಖೆ ಶುರು ಮಾಡಿದೆ.ಸಿಐಡಿ ಎಸ್ ಪಿ ರಾಘವೇಂದ್ರ ಹೆಗಡೆ, ಡಿಎಸ್ಪಿಗಳಾದ ಶಂಕರಗೌಡ ಪಾಟೀಲ್, ತನ್ವೀರ್ ಅವರನ್ನೊಳಗೊಂಡ ತಂಡ ಕಲಬುರಗಿಗೆ ಆಗಮಿಸಿ ತನಿಖಾ ಕಾರ್ಯ ಕೈಗೆತ್ತಿಕೊಂಡಿದೆ.

ಕೆಇಎ ನಡೆಸಿದ ವಿವಿಧ ಹುದ್ದೆಗಳ ನೇಮಕಾತಿಯ ಪರೀಕ್ಷೆ ಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಎಸಗಿರುವ ಸಂಬಂಧ ಕಲಬುರಗಿ, ಅಫಜಲಪುರ, ಯಾದಗಿರಿಯಲ್ಲಿ ಅಕ್ರಮದ ರೂವಾರಿ, ಪಿಎಸ್‌ಐ ಹಗರಣದ ಕಿಂಗ್ ಪಿನ್ ಆರ್.‌ಡಿ. ಪಾಟೀಲ್ ಸೇರಿ ಹಲವರ ವಿರುದ್ಧ ದೂರು ದಾಖಲಾಗಿದೆ. ಈಗಾಲೇ ಆರ್. ಡಿ.‌ಪಾಟೀಲ್ ಸೇರಿ 20 ಕ್ಕೂ ಅಧಿಕ ಅಭ್ಯರ್ಥಿ ಗಳು ಹಾಗೂ ಸಹಾಯಕರ ಬಂಧನವಾಗಿದೆ.

ಪರೀಕ್ಷೆ ಅಕ್ರಮದ ನಂತರ ಆರ್.‌ಡಿ.‌ಪಾಟೀಲ್ ಪರಾರಿಯಾಗಿದ್ದ, ತದನಂತರ ನಗರದಲ್ಲಿದ್ದರೂ ಪೊಲೀಸ್ ರಿಗೆ ಚಳ್ಳೆಹಣ್ಣು ತಿನ್ನಿಸಿದ್ದ. ನಂತರ ಪೊಲೀಸ ರು ಕಾರ್ಯಾಚರಣೆ ನಡೆಸಿ ನೆರೆಯ ಮಹಾರಾಷ್ಟ್ರದ ಲ್ಲಿ ಬಂಧಿಸಿದ್ದರು.‌ ಒಟ್ಟಾರೆ ಈ ಪರೀಕ್ಷೆ ಅಕ್ರಮ ಆಡಳಿತರೂಢ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದು, ಬಿಜೆಪಿ ತೀವ್ರ ವಾಗ್ದಾಳಿ ನಡೆಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು