ಕಲಬುರಗಿ: ಯಾವುದೇ ಕಾರಣಕ್ಕೂ ತಮ್ಮ ಮತ ಮಾರಾಟಕ್ಕಿಲ್ಲ ಎಂಬ ಆತ್ಮಸಾಕ್ಷಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.
ಇಲ್ಲಿನ ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಬುಧವಾರ ನ.30ರಂದು ನಡೆದ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಕುರಿತ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘‘ಚುನಾವಣೆಯಲ್ಲಿ ಹಣ, ಬಲ, ಜಾತಿ ಬಲ ಪ್ರಮುಖ ಪಾತ್ರ ವಹಿಸುತ್ತವೆ. ತಮ್ಮ ಮತಗಳನ್ನು ಮಾರಿಕೊಳ್ಳದವರಲ್ಲಿ ಉತ್ತಮರು ಎಂದರು.
“ನಿಂತಿರುವ ವ್ಯಕ್ತಿಗಳಲ್ಲಿ ಯಾರೂ ಉತ್ತಮವಾಗಿಲ್ಲದಿದ್ದರೆ, ನೋಟಾಕ್ಕಾಗಿ ಒತ್ತಿರಿ” ಎಂದು ಅವರು ಪ್ರತಿಪಾದಿಸಿದರು.