ಕಲಬುರಗಿ: ಬುದ್ಧನ ಶಾಂತಿಯ ಚಿಂತನೆಗಳನ್ನು ದೇಶದ ಜನತೆಗೆ ತಲುಪಿಸಲು ಪಬ್ಬಜ್ಜ (ಪಿಂಡಪಥ) ಕಾರ್ಯಕ್ರಮವನ್ನು ಆಯೋಜಿಸಿ ಸನ್ನತಿಗೆ ಬಂದಿದ್ದ ನೂರಾರು ಬೌದ್ಧ ಸನ್ಯಾಸಿಗಳು ಬೌದ್ಧ ತಾಣದ ಪಕ್ಕದಲ್ಲಿ ಪೊರಕೆ ಮತ್ತು ಗುದ್ದಲಿಗಳನ್ನು ಹಿಡಿದು ಸ್ವಚ್ಛಗೊಳಿಸಿದರು.
ಚಿತ್ತಾಪುರ ತಾಲ್ಲೂಕಿನ ಸನ್ನತಿ ಬುದ್ಧ ವಿಹಾರ ಮೌರ್ಯ ಸಾಮ್ರಾಜ್ಯದ ರಾಜನಾದ ಚಕ್ರವರ್ತಿ ಅಶೋಕನ ಕಾಲದಲ್ಲಿ 3 ನೇ ಶತಮಾನದ ಬೌದ್ಧ ಶಾಸನಗಳ ತಾಣವಾಗಿದ್ದು ಸುತ್ತಲೂ ಹರಡಿದ ಮುಳ್ಳುಗಳು ಮತ್ತು ಕಲ್ಲುಗಳ ರಾಶಿಯಿಂದ ದುಃಖಿತರಾದ ಭಂತೇಜಿಗಳು ಸ್ವತಃ ಸ್ವಚ್ಛತಾ ಅಭಿಯಾನವನ್ನು ಕೈಗೆತ್ತಿಕೊಂಡರು.
ಚರಿಕಾ ಭಿಕ್ಷಾಟನೆಯ ಪಾತ್ರೆಗಳನ್ನು ಕೆಳಗಿಳಿಸಿ ಮುಳ್ಳಿನ ಸಸಿಗಳನ್ನು ಕತ್ತರಿಸಿ ರಾಶಿ ಹಾಕಿ, ಘನತ್ಯಾಜ್ಯ, ಕಸ, ಕಲ್ಲು ಮತ್ತು ಸಗಣಿಯನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಮೂಲಕ ಗ್ರಾಮೀಣ ಜನರ ಗಮನ ಸೆಳೆದರು.