ಬಸವನಗುಡಿ: ಶ್ರೀ ದತ್ತಾತ್ರೇಯ ದೇವಸ್ಥಾನಂ ಟ್ರಸ್ಟ್ ಅವರು ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಶನ್ ಟ್ರಸ್ಟ್ ಸಹಯೋಗದೊಂದಿಗೆ ಶ್ರೀ ಸರಸ್ವತಿ ಮತ್ತು ಶ್ರೀ ದತ್ತಾತ್ರೇಯ ಹಂಪಿಹೊಳಿ ಸ್ಮರಣಾರ್ಥ ಬಸವನಗುಡಿ ಶ್ರೀ ದತ್ತಾತ್ರೇಯ ದೇವಸ್ಥಾನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಂಗೀತ ಸಂಧ್ಯಾ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿಗಳು ಲೋಕಾಯುಕ್ತ ಸಂತೋಷ್ ಹೆಗ್ಡೆ ಹಾಗು ಶಿಕ್ಷಣ ತಜ್ಞ ಡಾ.ವೂಡೇ ಪಿ ಕೃಷ್ಣ ಅವರನ್ನು ಪಂಡಿತ್ ಸತೀಶ್ ಹಂಪಿಹೊಳಿ ಸನ್ಮಾನಿಸಿದರು.
ನಿವೃತ್ತ ನ್ಯಾಯಮೂರ್ತಿಗಳು ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಮಾತನಾಡಿ ಜೈಲಿಗೆ ಹೋಗಿ ಬಂದವರಿಗೆ ಹಾರ ಹಾಕಿ ಸ್ವಾಗತಿಸುವುದು ಒಳ್ಳೆಯ ಸಂಸ್ಕಾರವಲ್ಲ ಕೋವಿಡ್ ಇನ್ನಿತರ ಖಾಯಿಲೆಗಳಿಗೆ ಮದ್ದಿದೆ ಆದರೆ ದುರಾಸೆಗೆ ಮದ್ದಿಲ್ಲ , ಹಾಗಾಗಿ ಸಮಾಜವನ್ನು ತಿದ್ದುವುದು ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ಶಿಕ್ಷಣ ತಜ್ಞ ಡಾ ವೂಡೇ ಪಿ ಕೃಷ್ಣ ಅವರು ಮಾತನಾಡಿ ಸತಿಶ್ ಅವರಿಗೆ ಆಯಾಸಕಾಂತ ಶಕ್ತಿ ಇದೆ , ತಾಯಿ ಮಗ, ಗುರು ಶಿಷ್ಯ ಎಲ್ಲರೂ ವೇದಿಕೆ ಹಂಚಿಕೊಂಡು ಸಂಗೀತ ಕಾರ್ಯಕ್ರಮ ನಡಿಸಿದ್ದು ವಿಶೇಷ . ವ್ಯಕ್ತಿತವದ ಸರ್ವಾಂಗೀಣ ಅಭಿವೃದ್ದಿಗೆ ಕಲೆ ಮುಖ್ಯ ಉತ್ತಮವಾದ ಸಂಗೀತ ಮಾತ್ರವಲ್ಲ ಉತ್ತಮ ಉದ್ದೇಶವೂ ಆಗಿದೆ. ತಂದೆ ತಾಯಿಯವರನ್ನು ಸ್ಮರಿಸುವುದು ಒಂದು ಒಳ್ಳೆಯ ಕಾರ್ಯಕ್ರಮ ಎಂದು ಹೇಳಿದರು.