ಕಲಬುರಗಿ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂಧ ಆನೆಗುಂದಿಯ ಅಂಜನಾದ್ರಿ ಬೆಟ್ಟಕ್ಕೆ ಡಿ.4ರ ಭಾನುವಾರ ನೂರಾರು ಹನುಮಾನ್ ಮಾಲಾಧಾರಿಗಳು ತೆರಳಿದ್ದಾರೆ.
ಹನುಮಮಾಲಾ ಕಾರ್ಯಕ್ರಮಕ್ಕಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ, ಉತ್ತರ ಕರ್ನಾಟಕ ಜಿಲ್ಲೆಗಳಿಂದ ಅಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಬೆಳೆಸಿದ್ದವು. ನಗರದ ನೆಹರೂಗಂಜ್ ಪ್ರದೇಶದಲ್ಲಿರುವ ಹನುಮಾನ್ ಮಂದಿರದಲ್ಲಿ ರುದ್ರಾಭಿಷೇಕ, ಹೋಮ ಹವನ ಮತ್ತು ನವಗ್ರಹ ಪೂಜೆಯ ನಂತರ 450 ಹನುಮಾನ್ ಮಾಲಾಧಾರಿಗಳಿಗೆ ಮಾಲಾರ್ಪಣೆ ಮಾಡಲಾಯಿತು.
ಚಂದು ಪಾಟೀಲ್ ನೇತೃತ್ವದಲ್ಲಿ ಭಾನುವಾರ ನಸುಕಿನಲ್ಲಿ ಕಾರ್ಯಕ್ರಮ ನಡೆಯಿತು.