News Karnataka Kannada
Monday, April 29 2024
ಕಲಬುರಗಿ

ಸಿಐಡಿ ಬಂಧನಗಳೆಲ್ಲ ಅಕ್ರಮ ಎಂದ ಅರ್.ಡಿ.ಪಾಟೀಲ

Cid arrests illegal, says RD Patil
Photo Credit : News Kannada

ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮದಲ್ಲಿ ಸಿಐಡಿ ಅಧಿಕಾರಿಗಳು ಮಾಡುತ್ತಿರುವ ಬಂಧನಗಳೆಲ್ಲವೂ ಅಕ್ರಮ. ಅಮಾಯಕರನ್ನು ಒತ್ತಾಯಪೂರ್ವಕ ‌ಒಪ್ಪಿಸಿ ‌ಬಂಧಿಸಲಾಗುತ್ತಿದೆ ಎಂದು ಅಕ್ರಮದ ರೂವಾರಿ ಎನ್ನಲಾಗಿರುವ ಆರ್.ಡಿ.ಪಾಟೀಲ ಅಲಿಯಾಸ್ ರುದ್ರಗೌಡ ಪಾಟೀಲ ಅಸಮಾಧಾನ ಹೊರ ಹಾಕಿದ್ದಾನೆ.

ಸಿಐಡಿ‌ ಕಚೇರಿಯಲ್ಲಿ ಶುಕ್ರವಾರ ಅಪರಾಹ್ನ ವೈದ್ಯಕೀಯ ತಪಾಸಣೆಗಾಗಿ ಜಿಮ್ಸ್ ಗೆ ಹೋಗಿ ಬರುವಾಗ ಮಾಧ್ಯಮಕ್ಕೆ ಮುಖಾಮುಖಿಯಾದಾಗ ಸಿಟ್ಟು, ಅಸಮಾಧಾನ ಹೊರ ಹಾಕಿದ ಆತ, ತನಿಖೆಯ ನೆಪದಲ್ಲಿ ಕೆಲವು ಅಮಾಯಕರನ್ನು ಬಂಧಿಸಲಾಗುತ್ತಿದೆ. ಯಾವನೋ ರುದ್ರಗೌಡ ಎನ್ನುವ ಎಇಯನ್ನು ಬಂಧನ ಮಾಡಿರುವುದು ಕಾನೂನು ಬಾಹಿರ ಎಂದು ಹೇಳಿದ್ದಾರೆ.

ವಿಚಾರಣೆ ನೆಪದಲ್ಲಿ ಬಿಳಿಯ ಹಾಳೆಯ ಮೇಲೆ‌ ಸಹಿ‌ ಪಡೆದು ನೀವು ಅಕ್ರಮದಲ್ಲಿ ಪಾಲ್ಗೊಂಡಿದ್ದೀರಿ ಎಂದು ಒತ್ತಾಯ ಮಾಡಲಾಗುತ್ತಿದೆ ಎಂದು ಹೇಳಿದ್ದಾನೆ.

ಎಲ್ಲ ಬಂಧನಗಳು ಅಕ್ರಮವಾಗಿವೆ. ಹೆದರಿಸಿ ಎಫ್‌ಐಆರ್ ಗಳನ್ನು ಹಾಕಲಾಗುತ್ತಿದೆ ಎಂದು ಹೇಳಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು