ಕಲಬುರ್ಗಿ: ಹುಡುಗಿ ವಿಚಾರಕ್ಕೆ ಉಂಟಾದಂತ ವೈಮನಸ್ಸು, ತಾರಕಕ್ಕೇರಿ ದೀಪಾವಳಿಯ ದಿನದಂದೇ, ಪೊಲೀಸ್ ಪೇದೆಯ ಪುತ್ರನೊಬ್ಬನನ್ನು ಬರ್ಬರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವಂತ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಕಲಬುರ್ಗಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ದುರ್ಷ್ಕರ್ಮಿಗಳು ಸಾವಿರಾರು ಜನರ ಮುಂದೆಯೇ, ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಾನ್ಸ್ ಟೇಬಲ್ ಒಬ್ಬರ ಪುತ್ರ ಅಭಿಷೇಕ್(25) ಎಂಬುವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.