News Karnataka Kannada
Friday, May 10 2024
ಕಲಬುರಗಿ

ಬಸ್ ದುರಂತ: ಸಂತಾಪ ವ್ಯಕ್ತಪಡಿಸಿದ ಶಾಸಕ ಡಾ. ಅಜಯ್ ಸಿಂಗ್

Ajay Singh Mla
Photo Credit :

ಕಲಬುರಗಿ: ಜಿಲ್ಲೆಯ ಕಮಲಾಪುರ ಬಳಿಯ ಚಾರ್ ಕಮಾನ್ ಹತ್ತಿರ ಶುಕ್ರವಾರ ಸಂಭವಿಸಿರುವ ಖಾಸಗಿ ಬಸ್ ದುರಂತದಲ್ಲಿ ಮಗು ಸೇರಿದಂತೆ ತೆಲಂಗಾಣ ರಾಜ್ಯದ 7 ಮಂದಿ ಸಾವನ್ನಪ್ಪಿರುವ ದುರಂತ ಘಟನೆಗೆ ಶಾಸಕ ಡಾ. ಅಜಯ್ ಸಿಂಗ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಹೈದ್ರಾಬಾದ್, ಸಿಕಿಂದರಾಬಾದ್‍ನ ನಿವಾಸಿಗಳು 30 ಜನ ಹುಟ್ಟುಹಬ್ಬ ಆಚರಿಸಿಕೊಂಡು ಗೋವಾದಿಂದ ತಮ್ಮೂರಿಗೆ ಮರಳುವಾಗ ದಾರಿಯಲ್ಲಿ ಅವರಿದ್ದ ಬಸ್ ಕಮಲಾಪುರ ಬಳಿ ಭೀಕರ ದುರಂತಕ್ಕೀಡಾಗಿರೋದು ಅತ್ಯಂತ ವಿಷಾದಕರ ಸಂಗತಿ. ದುರಂತದಲ್ಲಿ ಮಡಿದವರ ಕುಟುಂಬದವರಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಡಾ. ಅಜಯ್ ಸಿಂಗ್ ಪ್ರಾರ್ಥಿಸಿದ್ದಾರೆ.

ಮಾಜಿ ಸಿಎಂ ಹಾಗೂ ತಮ್ಮ ತಂದೆಯವರೂ ಆಗಿದ್ದಂತಹ ದಿ. ಧರಂಸಿಂಗ್ ಅವರು ಪಿಡಬ್ಲೂಡಿ ಸಚಿವರಾಗಿದ್ದಾಗ ಬೀದರ್- ಶ್ರೀರಂಗ ಪಟ್ಟಣ ಹೆದ್ದಾರಿ ಯೋಜನೆ ಅತ್ಯಂತ ಮುತುವರ್ಜಿಯಿಂದ ಮಾಡಿ ಮುಗಿಸಿದ್ದರು. ನಂತರ ಈ ದಾರಿಗೆ ರಾಷ್ಟ್ರೀಯ ಹೆದ್ದಾರಿ 150 ಪಟ್ಟವೂ ದೊರಕಿತ್ತು ಎಂದು ಮೆಲಕು ಹಾಕಿರುವ ಡಾ. ಅಜಯ್ ಸಿಂಗ್ ಈಗ ಈ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಬೇಕು ಎಂಬ ಜನರ ಒತ್ತಾಯವಿದ್ದರೂ ಡಬ್ಬಲ್ ಇಂಜೀನ್ ಸರ್ಕಾರ ಇದಕ್ಕೆ ಕಿವಿಗೊಡುತ್ತಿಲ್ಲ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ದೂರಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು